Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಅವರಿಂದ ರೈತರಿಗೆ, ಬಡವರಿಗೆ, ಯಾರಿಗೂ ಅನುಕೂಲ ಆಗಿಲ್ಲ – ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ ರೈತರಿಗೆ, ಬಡವರಿಗೆ, ಯಾರಿಗೂ ಅನುಕೂಲ ಆಗಿಲ್ಲ – ರಾಹುಲ್ ಗಾಂಧಿ
ತುಮಕೂರು , ಗುರುವಾರ, 5 ಏಪ್ರಿಲ್ 2018 (08:52 IST)
ತುಮಕೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದ ರೈತರಿಗೆ, ಬಡವರಿಗೆ, ಯಾರಿಗೂ ಅನುಕೂಲ ಆಗಿಲ್ಲ ಎಂದು ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.


ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ರೋಡ್‌ ಶೋನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,’ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಣ ಹಾಕುತ್ತೇನೆ ಎಂದಿದ್ದರು ಮೋದಿ. ನಿಮ್ಮಲ್ಲಿ ಯಾರಿಗಾದರೂ ಬಂದಿದೆಯೇ? ಯಾರಿಗಾದರೂ ಉದ್ಯೋಗ ದೊರೆತಿದೆಯೇ? ನಿಮಗೆ ಹಣ ಹಾಕಿಲ್ಲ, ಆದರೆ ನೀರವ್ ಮೋದಿ 13 ಸಾವಿರ ಕೋಟಿ ರೂ.ಹಣವನ್ನು ವಂಚಿಸಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪುತ್ರಿ, ನೀರವ್ ಮೋದಿ ಪರ ವಕೀಲರಾಗಿದ್ದಾರೆ’ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೂಟ್ಯೂಬ್ ಕೇಂದ್ರ ಕಚೇರಿಯಲ್ಲಿ ಗುಂಡಿನ ದಾಳಿ