Select Your Language

Notifications

webdunia
webdunia
webdunia
webdunia

ವಿಷ ಪ್ರಸಾದ ಪ್ರಕರಣ; ದೇಗುಲಕ್ಕೆ ಸಚಿವ ಭೇಟಿ

ವಿಷ ಪ್ರಸಾದ ಪ್ರಕರಣ; ದೇಗುಲಕ್ಕೆ ಸಚಿವ ಭೇಟಿ
ಚಾಮರಾಜನಗರ , ಶನಿವಾರ, 5 ಜನವರಿ 2019 (18:21 IST)
ವಿಷಪ್ರಸಾದ ದುರಂತದಲ್ಲಿ ಹದಿನೇಳು ಜನರ ಸಾವಿಗೆ ಕಾರಣವಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಮುಜರಾಯಿ ಇಲಾಖೆ ಸಚಿವ ಭೇಟಿ ನೀಡಿದರು.

ಸಚಿವ ಪರಮೇಶ್ವರ ನಾಯಕ್  ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಾಲಯವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಥಳದಲ್ಲೇ ಮಾರ್ಗದರ್ಶನ ನೀಡಿದರು.

ದೇವಾಲಯದ ಆವರಣದಲ್ಲಿರುವ ಹುಂಡಿಯನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿದರು. ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ದೇವಾಲಯದ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಸಿದ ಸಚಿವರು, ಸರ್ಕಾರ ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದೇನೆ‌. ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ತೆಗೆದುಕೊಳ್ಳುವ ನಿರ್ಧಾರವನ್ನು ಸಧ್ಯದಲ್ಲೇ ಹೊರಡಿಸಲಾಗುವುದು ಎಂದು ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ನಟೋರಿಯಸ್ ಗ್ಯಾಂಗ್ ಬಲೆಗೆ ಕೆಡವಿದ ಪೊಲೀಸರು!