Select Your Language

Notifications

webdunia
webdunia
webdunia
webdunia

ಬಿಸಿಲೂರಿನಲ್ಲಿ ಬೀದಿಗೆ ಇಳಿದ ಜನರು!

ಬಿಸಿಲೂರಿನಲ್ಲಿ ಬೀದಿಗೆ ಇಳಿದ ಜನರು!
ಕಲಬುರಗಿ , ಸೋಮವಾರ, 25 ಫೆಬ್ರವರಿ 2019 (17:03 IST)
ಬೇಸಿಗೆ ಆರಂಭದ ದಿನಗಳಲ್ಲಿಯೇ ಬಿಸಿಲೂರಿನ ಜನರು ತತ್ತರಿಸುತ್ತಿದ್ದಾರೆ. ಜೀವಜಲಕ್ಕಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಕಲಬುರಗಿಯ ಜಗತ್ ಬಡಾವಣೆ ನಿವಾಸಿಗಳಿಂದ ದಿಢೀರ್ ಪ್ರತಿಭಟನೆ ನಡೆಯಿತು.
ಕಲಬುರಗಿ ನಗರದ ಜಗತ್ ವೃತ್ತದಲ್ಲಿ ರಸ್ತೆ ತಡೆದು ಸ್ಥಳೀಯ ‌ನಿವಾಸಿಗಳು‌ ಪ್ರತಿಭಟನೆ ನಡೆಸಿದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಪೊಲೀಸರಿಂದ ಪ್ರತಿಭಟನೆಗೆ ತಡೆ ಒಡ್ಡಲಾಯಿತು.

ಆಗ ಬ್ರಹ್ಮಪುರ ಠಾಣೆ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್ ಜೊತೆ ಪ್ರತಿಭಟನಾನಿರತರು ವಾಗ್ವಾದ ನಡೆಸಿದರು. ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಸ್ಥಳಕ್ಕೆ ಮಹಾನಗರ ‌ಪಾಲಿಕೆ ಆಯುಕ್ತರು ಆಗಮಿಸುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದರು. ಕೊನೆಗೆ ಪ್ರತಿಭಟನಾನಿರತರ ಮನವೊಲಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

8 ಸಾವಿರ ಎಕರೆ ಭಸ್ಮ; ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡ್ತೇವೆ ಎಂದವರಾರು?