Select Your Language

Notifications

webdunia
webdunia
webdunia
webdunia

ಪ್ರಭಾಕರ ಕೋರೆ ಒಡೆತನದ ಕಾರ್ಖಾನೆಗೆ ಮುತ್ತಿಗೆ ಹಾಕಿದ ಜನರು!

ಪ್ರಭಾಕರ ಕೋರೆ ಒಡೆತನದ ಕಾರ್ಖಾನೆಗೆ ಮುತ್ತಿಗೆ ಹಾಕಿದ ಜನರು!
ಚಿಕ್ಕೋಡಿ , ಶುಕ್ರವಾರ, 28 ಡಿಸೆಂಬರ್ 2018 (18:48 IST)
ರಾಜಕೀಯ ಮುಖಂಡ ಹಾಗೂ ಕೆಎಲ್ ಇ ಸಂಸ್ಥೆ ಮುಖ್ಯಸ್ಥ ಪ್ರಭಾಕಾರ ಕೋರೆ ಒಡೆತನದ ಕಾರ್ಖಾನೆಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಬೂದಿ ಹಾಗೂ ಕೆಮಿಕಲ್ ನೀರು ಬಿಡುತ್ತಿರುವ ಹಿನ್ನೆಲೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ಸ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗಿದೆ.

ರಾಯಬಾಗ ತಾಲೂಕಿನ ಯಡ್ರಾಂವ್ ಗ್ರಾಮದ ಜನರು, ಪ್ರಭಾಕರ ಕೋರೆ ಒಡೆತನದ ಶಿವಶಕ್ತಿ ಶುಗರ್ಸ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕೋರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬು, ಮನೆಗಳ ಮೇಲೆ, ಗ್ರಾಮದಲ್ಲಿ ಬೂದಿ, ಕೆಮಿಕಲ್‌ ನೀರು ಬಿಡುತ್ತಿರುವ ಹಿನ್ನೆಲೆ ಪ್ರತಿಭಟನೆ ನಡೆದಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಗಂಗಾ ಶ್ರೀ ಗೆಲುವಾಗಿದ್ದಾರೆ ಎಂದ ನಿರ್ಮಲಾನಂದ ನಾಥ ಸ್ವಾಮೀಜಿ