Select Your Language

Notifications

webdunia
webdunia
webdunia
webdunia

ನನ್ನ ಮಗಳ ಪ್ರಾಣ ತೆಗೆದವನ ಪ್ರಾಣ ತೆಗೆದುಕೊಳ್ಳದೇ ಬಿಡಲ್ಲ: ನಿರಂಜನ್ ಹಿರೇಮಠ್

Niranjan Hiremath

Krishnaveni K

ಹುಬ್ಬಳ್ಳಿ , ಗುರುವಾರ, 25 ಏಪ್ರಿಲ್ 2024 (15:04 IST)
ಹುಬ್ಬಳ್ಳಿ: ಮಗಳು ನೇಹಾಳನ್ನು ಹತ್ಯೆ ಮಾಡಿದ ಫಯಾಜ್ ಬಗ್ಗೆ ಆಕ್ರೋಶ ವ್ಯಕಪಡಿಸಿರುವ ನಿರಂಜನ್ ಹಿರೇಮಠ್ ನನ್ನ ಪ್ರಾಣ ಹೋದರೂ ಆತನ ಪ್ರಾಣ ತೆಗೊಳ್ಳದೇ ಬಿಡಲ್ಲ ಎಂದಿದ್ದಾರೆ.

ನಿನ್ನೆಯಷ್ಟೇ ಸಿಐಡಿ ಆರೋಪಿ ಫಯಾಜ್ ನನ್ನು ವಶಕ್ಕೆ ಪಡೆದುಕೊಂಡು ಸ್ಥಳ ಮಹಜರು ನಡೆಸಿತ್ತು. ಸಿಐಡಿ ವಿಚಾರಣೆ ವೇಳೆ ಫಯಾಜ್ ತಾನು ಹತ್ಯೆಗಾಗಿ ನಡೆಸಿದ್ದ ಒಂದು ವಾರದ ಯೋಜನೆ ಬಗ್ಗೆ ಬಾಯ್ಬಿಟ್ಟಿದ್ದ. ಇದರ ಬಗ್ಗೆ ಈಗ ನಿರಂಜನ್ ಹಿರೇಮಠ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಮಗಳ ಶವದ ಮೇಲೆ ಶಪಥ ಮಾಡಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ಫಯಾಜ್ ಪ್ರಾಣ ತೆಗೆದುಕೊಳ್ಳುತ್ತೇನೆ. ಫಯಾಜ್ ಮಾತ್ರವಲ್ಲ, ಆತನಿಗೆ ಯಾರೋ ಬೇರೆಯವರೂ ಸಹಾಯ ಮಾಡಿದ್ದಾರೆ. ಅವರನ್ನೂ ಬಂಧಿಸಬೇಕು’ ಎಂದು ನಿರಂಜನ್ ಹಿರೇಮಠ್ ಆಗ್ರಹಿಸಿದ್ದಾರೆ.

ಹಂತಕ ಫಯಾಜ್ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ. ಕೆಲವು ದಿನಗಳಿಂದ ನಮಗೆ ಬೆದರಿಕೆ ಇತ್ತು. ಯಾರೋ ನಮ್ಮ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದರು. ಕೆಲವು ಅಪರಿಚಿತರು ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ. ಎಲ್ಲವನ್ನೂ ಸಿಐಡಿ ಗಮನಕ್ಕೆ ತಂದಿದ್ದೇನೆ ಎಂದು ನಿರಂಜನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ಚುನಾವಣಾ ಪ್ರಚಾರ ಕಣಕ್ಕೆ ಸುನಿತಾ ಕೇಜ್ರಿವಾಲ್