Select Your Language

Notifications

webdunia
webdunia
webdunia
webdunia

ಪರೇಶ ಮೇಸ್ತಾ ಅವರ ನಿಗೂಢ ಸಾವು; ಇಂದು ಸಾಗರ ಬಂದ್ ಗೆ ಕರೆ

ಪರೇಶ ಮೇಸ್ತಾ ಅವರ ನಿಗೂಢ ಸಾವು; ಇಂದು ಸಾಗರ ಬಂದ್ ಗೆ ಕರೆ
ಶಿವಮೊಗ್ಗ , ಗುರುವಾರ, 14 ಡಿಸೆಂಬರ್ 2017 (10:41 IST)
ಶಿವಮೊಗ್ಗ: ಪರೇಶ ಮೇಸ್ತಾ ಅವರ  ನಿಗೂಢ ಸಾವಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ  ಪ್ರತಿಭಟನೆಗಳು ನಡೆದಿದ್ದು, ಇಂದು ಕೂಡ ಸಾಗರ ಬಂದ್ ಗೆ ಕರೆ ನೀಡಲಾಗಿದೆ.


ವಿವಿಧ ಹಿಂದುಪರ ಸಂಘಟನೆಗಳಿಂದ ಇಂದು ಸಾಗರ ಬಂದ್ ಗೆ ಕರೆನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನಾ ಮೆರವಣಿಗೆ ಮಾಡಬಾರದು ಎಂದು ನಿಷೇಧಾಜ್ಞೆ ಜಾರಿಗೊಳಿಸಿದ ಎಸಿ ನಾಗರಾಜ್ ಸಿಂಗ್ರೇರ್ ಆದೇಶ ನೀಡಿದ್ದಾರೆ.


ನಿಷೇಧಾಜ್ಞೆ ಜಾರಿಗೊಳಿಸಿದ ಕಾರಣ ಇಂದು ನಡೆಯಬೇಕಿದ್ದ ಸಂತೆ,ವ್ಯಾಪಾರ ವನ್ನು ರದ್ದುಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಸಾಗರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 144 ಸೆಕ್ಷನ್ ಕೂಡ ಜಾರಿಯಲ್ಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಹನಕ್ಕೆ ಢಿಕ್ಕಿ ಹೊಡೆದು ಮೂವರು ಬೈಕ್ ಸವಾರರ ದುರ್ಮರಣ