Select Your Language

Notifications

webdunia
webdunia
webdunia
webdunia

ವರದಿಗಾರನ ಜತೆ ವಾಗ್ವಾದ ಮಾಡಿದ ಎಂಎಲ್ಸಿ

ವರದಿಗಾರನ ಜತೆ ವಾಗ್ವಾದ ಮಾಡಿದ ಎಂಎಲ್ಸಿ
ಚಿತ್ರದುರ್ಗ , ಗುರುವಾರ, 25 ಅಕ್ಟೋಬರ್ 2018 (16:24 IST)
ಜಿಲ್ಲೆಯ ಅಭಿವೃದ್ದಿಗೆ ನಿಮ್ಮ ಶ್ರಮ ಏನು ಎಂದು ಕೇಳಿದ್ದಕ್ಕೆ ವರದಿಗಾರನ ವಿರುದ್ಧ ಎಂಎಲ್ ಸಿಯೊಬ್ಬರು ಕಿಡಿಕಾರಿದ್ದಾರೆ. ನಿಮ್ಮಿಂದ ನಾನು ಎಂ ಎಲ್ ಸಿ ಅಗಿಲ್ಲ ಎಂದು ವಾಗ್ವಾದ ನಡೆಸಿದ್ದಾರೆ.

ಚಿತ್ರದುರ್ಗ ಎಂ ಎಲ್ ಸಿ ರಘು ಆಚಾರ್ ಮತ್ತು ವರದಿಗಾರನ ಜೊತೆ ಮಾತಿನ ವಾಗ್ವಾದ ನಡೆದಿದೆ.  
ಜಿಲ್ಲೆಯ ಅಭಿವೃದ್ದಿಗೆ ನಿಮ್ಮ ಶ್ರಮ ಏನು ಎಂದು ಕೇಳಿದ್ದಕ್ಕೆ ನಿಮ್ಮಿಂದ ನಾನು ಎಂ ಎಲ್ ಸಿ ಅಗಿಲ್ಲ ಎಂದು ಕಿಡಿ ಕಾರಿದ ರಘು ಆಚಾರ್ ತಮ್ಮ ಸ್ಥಾನ ಮರೆತು ಮಾತನಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಜಿಲ್ಲಾಭಿವೃದ್ದಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಧಿಕಾರಿಗಳ‌ ಸಭೆಯಲ್ಲಿ ಈ ಘಟನೆ ನಡೆದಿದೆ.

ನೀವು ರಾಜಕಾರಣಿ ಹಾಗೆಲ್ಲ ಮಾತನಾಡುವುದು ಸರಿಯಲ್ಲ. ಎಂದು ಹೇಳಿದ್ದಕ್ಕೆ ನಿಮ್ಮಿಂದ ನಾನು ಎಂ ಎಲ್ ಸಿ ಆಗಿಲ್ಲ ಎಂದು ಹೇಳಿದರು. ಮಾಹಿತಿಯನ್ನು ಸರಿಯಾಗಿ ಹೇಳದೆ ಹಾಗೆಯೇ ಹೊರಟು ಹೋದ ರಘು ಅಚಾರ್ ಕ್ರಮಕ್ಕೆ ವಿರೋಧ ಕೂಡ ವ್ಯಕ್ತವಾಯಿತು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಕಿತ್ತೂರು ಉತ್ಸವದಲ್ಲಿ ಬಿಜೆಪಿ ಮುಖಂಡನ ಭರ್ಜರಿ ಡ್ಯಾನ್ಸ್