Select Your Language

Notifications

webdunia
webdunia
webdunia
webdunia

ಕೈ ಹೈಕಮಾಂಡ್ ಗೆ ಬಿಗ್ ಶಾಕ್ ನೀಡಿದ ಸಚಿವ!

ಕೈ ಹೈಕಮಾಂಡ್ ಗೆ ಬಿಗ್ ಶಾಕ್ ನೀಡಿದ ಸಚಿವ!
ಮಂಡ್ಯ , ಗುರುವಾರ, 31 ಜನವರಿ 2019 (19:47 IST)
ಕಾಂಗ್ರೆಸ್ ಹೈ ಕಮಾಂಡ್‌ ಅನ್ನು ಖಾರವಾಗಿ ಸಚಿವರೊಬ್ಬರು ಎಚ್ಚರಿಸಿದ್ದಾರೆ.

ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಸರ್ಕಾರ ಐದು ವರ್ಷ ಸುಲಲಿತವಾಗಿ ನಡೆಯಬೇಕು ಅಂದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸ್ಪಷ್ಟವಾಗಿ ರಾಜ್ಯದ ನಾಯಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೇಲುಕೋಟೆಯಲ್ಲಿ ಮಾತನಾಡಿದ ಸಚಿವ ಪುಟ್ಟರಾಜು, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಇದ್ದಾರೆ. ಅವರ ನೇತೃತ್ವದಲ್ಲಿ ಸರ್ವತೋಮುಖ ಅಭಿವೃದ್ಧಿ ಗೆ ಕೆಲಸ ಮಾಡಲು ಸೂಚನೆ ನೀಡಬೇಕು. ಬಿಡಿಎ ಚೇರ್ಮನ್ ಆಗಿದ್ದವನು ಬೀದೀಲಿ ನಿಂತು ಮುಖ್ಯಮಂತ್ರಿ ಬಗ್ಗೆ ಮಾತನಾಡಿದರೆ ಸುಮ್ಮನಿರಲು ಆಗುತ್ತಾ ಎಂದು ಆಕ್ರೋಶ ವ್ಯಕ್ತಪಡಿದರು. ಎಲ್ಲವನ್ನು ಸರಿ ಮಾಡದಿದ್ರೆ ಮುಂದಾಗುವುದಕ್ಕೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ ಎಂದರು.

ಸಿ.ಪಿ.ಯೋಗೇಶ್ವರ್ ಕೆಲವು ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅವನು ಈಗಿನಿಂದ ಅಲ್ಲ, ಕಳೆದ ಏಳು ತಿಂಗಳಿಂದ ಪ್ರಯತ್ನಿಸುತ್ತಿದ್ದಾನೆ. ಸಾಧ್ಯ ಆಗಿಲ್ಲ ಅಷ್ಟೇ ಎಂದು ಏಕವಚನದಲ್ಲಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಪಂಚಕಲ್ಯಾಣಿ ಅಭಿವೃದ್ಧಿಗೆ ಸುಧಾಮೂರ್ತಿ ಚಾಲನೆ