Select Your Language

Notifications

webdunia
webdunia
webdunia
webdunia

ಮಾದಿಗ ಸಭೆಯಲ್ಲಿ ಜಟಾಪಟಿ

ಮಾದಿಗ ಸಭೆಯಲ್ಲಿ ಜಟಾಪಟಿ
ಚಿತ್ರದುರ್ಗ , ಶುಕ್ರವಾರ, 4 ಜನವರಿ 2019 (15:03 IST)
ಚಿತ್ರದುರ್ಗ ಜಿಲ್ಲಾ ಮಾದಿಗ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.

ಆದಿ ಜಾಂಬವ ನಿಗಮದ ಸ್ಥಾಪನೆ ಕುರಿತು ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು. ಚಿತ್ರದುರ್ಗ ನಗರದ ಕ್ರೀಡಾ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಮಾಜ ಕಲ್ಯಾಣ ಮಾಜಿ ಮಂತ್ರಿ ಹೆಚ್.ಆಂಜನೇಯ ಮತ್ತು ಜಿ.ಎಸ್. ಮಂಜುನಾಥ್ ನಡುವೆ ಮಾತಿನ ಚಕಮಕಿ ನಡೆಯಿತು.

ಎಚ್.ಆಂಜನೇಯ ಭಾಷಣ ಮುಗಿಯುತ್ತಿದ್ದಂತೆ ನಾನು ಮಾತನಾಡುವೆ ಎಂದು ಮಂಜುನಾಥ್ ಹೇಳಿದರು. ಆಗ
ಕಾಂಗ್ರೇಸ್ ಮುಂಖಂಡ ಮಂಜುನಾಥ್ ಹಾಗೂ ಆಂಜನೇಯ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ನಿನ್ನೆ ಅಷ್ಟೇ ಜಿ. ಎಸ್. ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಆಂಜನೇಯ ವಿರುದ್ಧ ಮಾತನಾಡಿದ್ದರು. ಮಾತಿನ ಚಕಮಕಿ ಸಂದರ್ಭದಲ್ಲಿ ಮಾದಿಗ ಆದಿ ಜಾಂಬವ ನಿಗಮಕ್ಕೆ ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಸಭೆ ಗೊಂದಲದ ಗೂಡಾಯಿತು. ಪೊಲೀಸರು ಮಧ್ಯ ಪ್ರವೇಶ ಮಾಡಿ ಗಲಾಟೆ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ವಾಸಿಸಲು ಆತಂಕವಿದೆ ಎಂದವರಿಗೆ ಬಾಂಬ್ ಹಾಕಿ ಕೊಲ್ಲಬೇಕು- ಶಾಸಕ ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆ