Select Your Language

Notifications

webdunia
webdunia
webdunia
webdunia

ಮಧುಗಿರಿಯ ಶಾಸಕರ ಮನೆಗೆ ಹೋದ ಸಿ.ಎಂ ಸಿದ್ದರಾಮಯ್ಯಗೆ ಸಿಕ್ಕ ರಾಜಾತಿಥ್ಯ ಏನು ಗೊತ್ತಾ...?

ಮಧುಗಿರಿಯ ಶಾಸಕರ ಮನೆಗೆ ಹೋದ ಸಿ.ಎಂ ಸಿದ್ದರಾಮಯ್ಯಗೆ ಸಿಕ್ಕ ರಾಜಾತಿಥ್ಯ ಏನು ಗೊತ್ತಾ...?
ತುಮಕೂರು , ಶುಕ್ರವಾರ, 29 ಡಿಸೆಂಬರ್ 2017 (15:06 IST)
ತುಮಕೂರು:  ಮಧುಗಿರಿಯ ಶಾಸಕ ಕೆಎನ್ ರಾಜಣ್ಣ ಅವರ  ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಳ್ಳಿ ತಟ್ಟೆ, ಲೋಟದಲ್ಲಿ ಉಪಹಾರ ಸ್ವೀಕರಿಸಿದ್ದರು.


ಇವರು ಸಮಾವೇಶಕ್ಕೆ ಬರುವ ಮುನ್ನ ತುಮಕೂರಿನಲ್ಲಿ ವಾಸ್ತವ್ಯ ಹೂಡಿದ್ದು, ಆ ಸಂದರ್ಭದಲ್ಲಿ ಶಾಸಕ ಕೆಎನ್ ರಾಜಣ್ಣ ಅವರು ಬೆಳಿಗ್ಗೆ ಉಪಹಾರಕ್ಕೆಂದು ಸಿಎಂ ಅವರನ್ನು ತಮ್ಮ ಕ್ಯಾತ್ಸಂದ್ರ ದಲ್ಲಿರುವ ಮನೆಗೆ ಆಹ್ವಾನಿಸಿದ್ದರು. ಅಲ್ಲಿಗೆ ಹೋದಾಗ ಶಾಸಕರು ಅವರಿಗೆ  ಉಪಹಾರವನ್ನು ಬೆಳ್ಳಿ ತಟ್ಟೆ, ಲೋಟದಲ್ಲಿ ನೀಡಿದ್ದರು.


ಸಮಾಜವಾದದ ಬಗ್ಗೆ ಮಾತನಾಡುವ ಸಿಎಂ ಅವರು ಅಲ್ಲಿದ್ದವರಿಗೆ ನೀಡಿದ ಮಾಮೂಲಿ ತಟ್ಟೆಯಲ್ಲೇ ತನಗೂ ಕೊಡಿ ಎಂದು ಹೇಳುವ ಬದಲು ಅದರಲ್ಲೇ ಉಪಹಾರ ಸೇವಿಸಿದರು. ರಾಜಣ್ಣ ಹಾಗು ಅವರ ಪುತ್ರ ಸೇರಿ ಸಿಎಂಗೆ ಆತಿಥ್ಯ ನೀಡಿದ್ದರು. ಹಾಗೆ ಶಾಸಕ ಕೆಎನ್ ರಾಜಣ್ಣ ಅವರು ಮುಂಬರುವ ಚುನಾವಣೆಯಲ್ಲಿ ತಮ್ಮ ಪುತ್ರನಿಗೂ ಒಂದು ಟಿಕೇಟು ಕೊಡಿಸಬೇಕೆಂದು ವಿನಂತಿ  ಕೂಡ ಮಾಡಿದ್ದರು. ಆದ ಕಾರಣ ಸಿಎಂ ಓಲೈಸಲು ಶಾಸಕರು ಈ ರೀತಿಯಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬರುವ ಚುನಾವಣೆಯಲ್ಲಿ ಸಚಿವ ಮಹಾದೇವಪ್ಪರಿಂದ ಕ್ಷೇತ್ರ ಬದಲಾವಣೆ