Select Your Language

Notifications

webdunia
webdunia
webdunia
webdunia

ಕೊಲೆ- ಆತ್ಮಹತ್ಯೆಯಲ್ಲಿ ಕೊನೆಯಾದ ಅನೈತಿಕ ಸಂಬಂಧ

ಕೊಲೆ- ಆತ್ಮಹತ್ಯೆಯಲ್ಲಿ ಕೊನೆಯಾದ ಅನೈತಿಕ ಸಂಬಂಧ
ಬೆಂಗಳೂರು , ಶನಿವಾರ, 14 ಜನವರಿ 2017 (08:00 IST)
ಶೂಟೌಟ್‌ನಲ್ಲಿ ಬಲಿಯಾದ ಬೆಂಗಳೂರಿನ ವಕೀಲ ಅಮಿತ್ ಪ್ರೇಯಸಿ ಶೃತಿ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಆಚಾರ್ಯ ಕಾಲೇಜು ಬಳಿ ಅಮಿತ್ ಗುಂಡೇಟಿಗೆ ಬಲಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಶೃತಿ ಪತಿಯ ತಂದೆ ಕಗ್ಗಲಿಪುರದ ಗೋಪಾಲಕೃಷ್ಣ(78) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
 
ಘಟನೆ ವಿವರ: ಮೃತ ವಕೀಲ ಅಮಿತ್‌ಗೆ ಗೊಲ್ಲಹಳ್ಳಿಯಲ್ಲಿ ಪಿಡಿಓ ಆಗಿರುವ ಶ್ರುತಿ ಜತೆ ಪ್ರೇಮ ಸಂಬಂಧವಿತ್ತು. ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಶ್ರುತಿ ಪತಿ ರಾಜೇಶ್‌ಗೆ ಈ ವಿಷಯ ಗೊತ್ತಾಗಿ ಆತ ಬಹಳ ದಿನಗಳಿಂದ ಖಿನ್ನನಾಗಿದ್ದ. ಇದರಿಂದ ಮನನೊಂದ ರಾಜೇಶ್ ತಂದೆ ಸೊಸೆ ಮತ್ತು ಆಕೆಯ ಪ್ರಿಯಕರ ನಿನ್ನೆ ಮಧ್ಯಾಹ್ನ ಜತೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಗುಂಡು ಹಾರಿಸಿ ಅಮಿತ್‌ನನ್ನು ಕೊಂದಿದ್ದಾರೆ ಎನ್ನಲಾಗಿದೆ.
 
ಗಾಯಗೊಂಡಿದ್ದ ಅಮಿತ್‌ನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದ ಶೃತಿ, ಆ ಆಸ್ಪತ್ರೆಯ ಮುಂದಿದ್ದ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಹಾಜರಾದ ನಟಿ ಪೂಜಾ ಗಾಂಧಿ