Select Your Language

Notifications

webdunia
webdunia
webdunia
webdunia

ಸಚಿವ ಜಮೀರ್ ಅಹ್ಮದ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ಗೆ ಲ್ಯಾಂಡಿಂಗ್ ಟ್ರಬಲ್

ಸಚಿವ ಜಮೀರ್ ಅಹ್ಮದ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ಗೆ ಲ್ಯಾಂಡಿಂಗ್ ಟ್ರಬಲ್
ಮಂಗಳೂರು , ಸೋಮವಾರ, 25 ಜೂನ್ 2018 (17:59 IST)
ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಆಗಮಿಸುತ್ತಿದ್ದ ಸಚಿವ ಜಮೀರ್ ಅಹ್ಮದ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ಗೆ ಲ್ಯಾಂಡಿಂಗ್ ಟ್ರಬಲ್ ಆದ ಘಟನೆ ನಡೆದಿದೆ.

ಹೀಗಾಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡದೇ ಜಮೀಹ್ ಅಹ್ಮದ್ ಮರಳಿಹೋಗಿದ್ದಾರೆ. ಮಳೆ ಹಾಗೂ ವಾತಾವರಣ, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಸಮಸ್ಯೆ ಎದುರಾಗಿದೆ.

ಹೀಗಾಗಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಸಚಿವ ಜಮೀರ್ ಅಹ್ಮದ್ ಅವರಿದ್ದ ಹೆಲಿಕಾಪ್ಟರ್ ಧರ್ಮಸ್ಥಳದ ಬಳಿಯ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಸಕಲೇಶಪುರದಿಂದಲೇ ಸಚಿವ ಜಮೀರ್ ಅಹ್ಮದ್ ವಾಪಸ್ ಹೋದ ಘಟನೆ ನಡೆದಿದೆ.

ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗದ ಕಾರಣ ಸಿದ್ದರಾಮಯ್ಯನವರನ್ನು ಭೇಟಿ ಆಗದೇ ಜಮೀರ್ ಅಹ್ಮದ್ ಮರಳಿದರು. ಅಲ್ಲದೇ ಅವರು ಪಾಲ್ಗೊಳ್ಳಬೇಕಿದ್ದ ಕೆಲವು ಕಾರ್ಯಕ್ರಮಗಳೂ ರದ್ದುಗೊಂಡವು.  

Share this Story:

Follow Webdunia kannada

ಮುಂದಿನ ಸುದ್ದಿ

ಪಾಠ ಕೇಳುವುದಕ್ಕೆ ಹಾಜರಾದ ಹಾವು...!