Select Your Language

Notifications

webdunia
webdunia
webdunia
webdunia

ಚುನಾವಣೆ ಹೊಸ್ತಿಲಲ್ಲೇ ಕಿಚ್ಚ ಸುದೀಪ್-ಕುಮಾರಸ್ವಾಮಿ ರಹಸ್ಯ ಭೇಟಿ!

ಚುನಾವಣೆ ಹೊಸ್ತಿಲಲ್ಲೇ ಕಿಚ್ಚ ಸುದೀಪ್-ಕುಮಾರಸ್ವಾಮಿ ರಹಸ್ಯ ಭೇಟಿ!
ಬೆಂಗಳೂರು , ಮಂಗಳವಾರ, 3 ಏಪ್ರಿಲ್ 2018 (10:56 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆ ಕಿಚ್ಚ ಸುದೀಪ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಚುನಾವಣೆ ಹೊಸ್ತಿಲಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಇದಕ್ಕೂ ಮೊದಲು ಕುಮಾರಸ್ವಾಮಿ ಸುದೀಪ್ ಭೇಟಿಯಾಗಿ ಜೆಡಿಎಸ್ ಪರ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ ಆಗ ಸುದೀಪ್ ಯಾವುದೇ ಭರವಸೆ ಕೊಟ್ಟಿಲ್ಲವೆನ್ನಲಾಗಿತ್ತು. ಇದೀಗ ಮತ್ತೆ ಕುಮಾರಸ್ವಾಮಿ, ಸುದೀಪ್ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, ‘ನಾವು ಭೇಟಿಯಾಗಿರುವುದು ನಿಜ. ಜೆಡಿಎಸ್ ಪರ ನಿಮ್ಮ ವೃತ್ತಿಗೆ ತೊಂದರೆಯಾಗದಂತೆ ಪ್ರಚಾರಕ್ಕೆ ಬರಲು ಆಹ್ವಾನಿಸಿದ್ದೇನೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲು ಅಧಿಕಾರಕ್ಕೆ ಬರ್ತೀವಿ, ಸಿಎಂ ಯಾರಾಗಬೇಕೆಂದು ಮತ್ತೆ ತೀರ್ಮಾನ ಮಾಡ್ತೀವಿ: ಜಿ ಪರಮೇಶ್ವರ್