Select Your Language

Notifications

webdunia
webdunia
webdunia
webdunia

ರಾಜಕೀಯ ಅಪವಾದ ತಪ್ಪಿಸಿಕೊಳ್ಳಲು ಬಿಜೆಪಿ ಮುಖಂಡರ ಮೇಲೆ ಐಟಿ ದಾಳಿ

ರಾಜಕೀಯ ಅಪವಾದ ತಪ್ಪಿಸಿಕೊಳ್ಳಲು ಬಿಜೆಪಿ ಮುಖಂಡರ ಮೇಲೆ ಐಟಿ ದಾಳಿ
ಮೈಸೂರು , ಬುಧವಾರ, 9 ಮೇ 2018 (13:14 IST)
ಶ್ರೀರಾಮಲು ಬೆಂಬಲಿಗರ ಮೇಲೆ ಐಟಿ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇದು ಉದ್ದೇಶ ಪೂರ್ವಕವಾಗಿ ರಾಜಕೀಯ ಕಾರಣಗಳಿಂದ ಬಿಜೆಪಿಗರ ಮೇಲೂ ಐಟಿ ದಾಳಿ ನಡೆಸಲಾಗಿದೆ. ಇಂತಹ ಕುತಂತ್ರಗಳನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಗುಡುಗಿದರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದನ್ನು ಮರೆಮಾಚಲು ಬಿಜೆಪಿಗರು ಅಪವಾದದಿಂದ ತಪ್ಪಿಸಿಕೊಳ್ಳಲು ಕೆಲ ಬಿಜೆಪಿ ಮುಖಂಡರ ಮನೆ ಮೇಲೆ ತೋರಿಕೆಗಾಗಿ ರೀತಿ ಐಟಿ ದಾಳಿ ನಡೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
 
ನಾನು 12 ಚುನಾವಣೆಗಳನ್ನ ನೋಡಿದ್ದೇನೆ ಯಾವ ಕಾಲದಲ್ಲೂ ಚುನಾವಣೆ ವೇಳೆ ಐಟಿ ದಾಳಿ ನಡೆದಿರಲಿಲ್ಲ. ಅಲ್ಲಿ ನಮ್ಮ ನಾಯಕರು ಉಳಿದುಕೊಂಡಿರುವ ಕೊಠಡಿಗಳ ಮೇಲೆಯೇ ಐಟಿ‌ ರೈಡ್ ಆಗಿದೆ
 
ಬೆಂಗಳೂರಿನ ಆರ್ ಆರ್ ನಗರದಲ್ಲಿ ‌ಫೇಕ್ ಓಟರ್ ಐಡಿಗಳು ಸಿಕ್ಕ ಪ್ರಕರಣ ಕುರಿತಂತೆ ಅದರ ಬಗ್ಗೆ ನನಗೇನು ಗೊತ್ತಿಲ್ಲ ಚುನಾವಣಾಧಿಕಾರಿಗಳು ಆ ಬಗ್ಗೆ ತನಿಖೆ ಮಾಡಲಿ. ಅನಂತ್ ಕುಮಾರ್ ಮಾತನ್ನು ಅಷ್ಟು ಗಂಭಿರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ಕಾರಣಕ್ಕೆ ಚುನಾವಣೆ ಮುಂದೂಡಬೇಕು ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮೃತಿ ಇರಾನಿ ಆರೋಗ್ಯದಲ್ಲಿ ಏರುಪೇರು: ಚುನಾವಣೆ ಪ್ರಚಾರ ಅರ್ಧಕ್ಕೆ ಮೊಟಕು