Select Your Language

Notifications

webdunia
webdunia
webdunia
webdunia

ಟಿಪ್ಪು ಸುಲ್ತಾನ್ ರಕ್ತ ಹಂಚಿಕೊಂಡಿ ಹುಟ್ಟಿರುವ ಸಿದ್ದರಾಮಯ್ಯ ಎಂದ ಈಶ್ವರಪ್ಪ

ಟಿಪ್ಪು ಸುಲ್ತಾನ್ ರಕ್ತ ಹಂಚಿಕೊಂಡಿ ಹುಟ್ಟಿರುವ ಸಿದ್ದರಾಮಯ್ಯ ಎಂದ ಈಶ್ವರಪ್ಪ
ಶಿವಮೊಗ್ಗ , ಶುಕ್ರವಾರ, 29 ಡಿಸೆಂಬರ್ 2017 (11:26 IST)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು ಎಂದು ಪ್ರತಿ ಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ.


ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಉಡುಪಿಗೆ ಹೋಗಿಯೂ ಶ್ರೀಕೃಷ್ಣನ ದರ್ಶನ ಮಾಡದ ಸಿದ್ದರಾಮಯ್ಯ ಟಿಪ್ಪು ಸುಲ್ತಾನ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ ಎಂದಿದ್ದಾರೆ


ಇತ್ತೀಚೆಗೆ ದೇವರ ಮೇಲೆ ಸಿದ್ದರಾಮಯ್ಯ ಅವರಿಗೆ ಭಕ್ತಿ ಬಂದಂತೆ ಕಾಣುತ್ತಿದೆ. ಆದರೆ, ಉಡುಪಿಗೆ ಭೇಟಿ ಕೊಟ್ಟ ಸಂದರ್ಭ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಲು ಆಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

 

ಗೋಡೆ ಒಡೆದು ಕಿಂಡಿಯ ಮೂಲಕ ಭಕ್ತನಿಗೆ ದರ್ಶನ ನೀಡಿದ ಕನಕದಾಸರ ರಕ್ತವನ್ನು ಹಂಚಿಕೊಂಡು ನಾನು ಹುಟ್ಟಿದವನು ಎಂದಿರುವ ಈಶ್ವರಪ್ಪ ಶ್ರೀ ಕೃಷ್ಣನ ದರ್ಶನ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಸುಲ್ತಾನ್ರಕ್ತ ಹಂಚಿಕೊಂಡು ಹುಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ನಾಡಿನ ಕವಿ ಕುವೆಂಪು ಅವರಿಗೆ ಗೂಗಲ್ ಡೂಡಲ್ ಗೌರವ