Select Your Language

Notifications

webdunia
webdunia
webdunia
webdunia

ಈಶ್ವರ ಖಂಡ್ರೆಗೆ ಟಿಕೆಟ್ ಡೌಟ್?

ಈಶ್ವರ ಖಂಡ್ರೆಗೆ ಟಿಕೆಟ್ ಡೌಟ್?
ಬೀದರ್ , ಶುಕ್ರವಾರ, 22 ಮಾರ್ಚ್ 2019 (14:06 IST)
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ ಅವರಿಗೇ ಟಿಕೆಟ್ ಸಿಗುವುದೇ ಡೌಟ್ ಎಂಬ ಮಾತುಗಳು ಹರಿದಾಡಲಾರಂಭಿಸಿವೆ.

ಬೀದರ್ ಲೋಕಸಭಾ ಟಿಕೆಟ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರಗೆ ಸಿಗುವುದು ಡೌಟ್..? ಎಂಬ ಚರ್ಚೆ ಶುರುವಾಗಿದೆ.
ಈಶ್ವರ ಖಂಡ್ರೆಗೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ ಅಡ್ಡಗಾಲು  ಹಾಕಲಾಗುತ್ತಿದೆ ಎಂಬ ಮಾತುಗಳು ಚಾಲ್ತಿಗೆ ಬಂದಿವೆ.

ಈಶ್ವರ ಖಂಡ್ರೆ  ರಾಜ್ಯ ಕೆಪಿಸಿಸಿ ಕಾರ್ಯ ಅಧ್ಯಕ್ಷ ಆಗಿದ್ದಾರೆ. ಬೀದರ್ ನಲ್ಲಿ ಹೊಸಬರಿಗೆ ಮಣೆ ಹಾಕಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ವಾದವಾಗಿದೆ ಎನ್ನಲಾಗಿದೆ.

ಇನ್ನೊಂದು ಕಡೆ‌ ದಿವಂಗತ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಪುತ್ರ ವಿಜಯಸಿಂಗ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಮೇಲೆ ಬಾರಿ ಒತ್ತಡ ಹಾಕಿದ ವಿಜಯಸಿಂಗ್ ಟಿಕೆಟ್ ಗೆ ಪ್ರಯತ್ನ ಮುಂದುವರಿಸಿದ್ದಾರೆ.
ಇಂದು ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಿಡುಗಡೆಯಾಗುತ್ತಿದೆ. ಹೀಗಾಗಿ  ಬೀದರ್ ಕ್ಷೇತ್ರದ ಕೈ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಉಳಿದುಕೊಂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಬಿಜೆಪಿಗೆ ಸೇರ್ಪಡೆ