Select Your Language

Notifications

webdunia
webdunia
webdunia
webdunia

ಬಾದಾಮಿಯಲ್ಲಿ ಪ್ರಚಾರಕ್ಕೆ ಹೋಗುವೆ: ಸತೀಶ ಜಾರಕಿಹೋಳಿ

ಬಾದಾಮಿಯಲ್ಲಿ ಪ್ರಚಾರಕ್ಕೆ ಹೋಗುವೆ: ಸತೀಶ ಜಾರಕಿಹೋಳಿ
ಬೆಳಗಾವಿ , ಸೋಮವಾರ, 23 ಏಪ್ರಿಲ್ 2018 (18:18 IST)
ಬಾದಾಮಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು,  ಉತ್ತರ ಕ್ಷೇತ್ರದ ಅಭ್ಯರ್ಥಿ ಫಿರೋಜ್ ಸೇಠ್ ಅವರ ನಾಮಪತ್ರ ಸಲ್ಲಿಕೆ ನಂತರ ಸತೀಶ  ಜಾರಕಿಹೊಳಿ ಅವರು ತಮ್ಮ ರಾಜಕೀಯ ಗುರು, ಆಪ್ತಮಿತ್ರ ಸಿಎಂ ಸಿದ್ದರಾಮಯ್ಯ ಅವರ ಗೆಲುವಿಗೆ ಶ್ರಮ ಪಡುವುದಾಗಿ ತಿಳಿಸಿದರು.
 
ಚಾಮುಂಡಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ನಂತರ ಬಾದಾಮಿಯಲ್ಲಿ ಬಹುಪಾಲು ಪ್ರಚಾರ ಮಾಡಿ ಸಿಎಂ ಸಿದ್ದರಾಮಯ್ಯ ಅವರನ್ನು ಶತಾಯ ಗಥಾಯ ಗೆಲ್ಲಿಸಿ ತರುವುದಾಗಿ ಸತೀಶ ಜಾರಕಿಹೊಳಿ ಘೋಷಿಸಿದ್ದಾರೆ.
 
ಈಗಾಗಲೇ ಬಾದಾಮಿ ಕ್ಷೇತ್ರಕ್ಕೆ ನಾನು ತೆರಳಬೇಕಿತ್ತು. ಆದರೆ ನನ್ನ ನಾಮಪತ್ರ ಮತ್ತು ಇತರ ನಾಯಕರ ನಾಮಪತ್ರ ಸಲ್ಲಿಸಲು ಇಲ್ಲೇ ಇರಬೇಕಾಗಿದೆ. ಆ ನಂತರ ನಾನು ಬಾದಾಮಿಗೆ ಹೋಗುವೆ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ತಮ್ಮೊಂದಿಗೆ ಮೈಸೂರಿಂದ ಕರೆ ಮಾಡಿ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ ರೆಡ್ಡಿ, ಶ್ರೀರಾಮುಲು, ಬಿಜೆಪಿ ವಿರುದ್ಧ ಗುಡುಗಿದ ಟಪಾಲ್ ಗಣೇಶ್