Select Your Language

Notifications

webdunia
webdunia
webdunia
webdunia

ಹಸಿವು ಮುಕ್ತ ರಾಜ್ಯವೇ ಕಾಂಗ್ರೆಸ್ ಸರಕಾರದ ಗುರಿ: ಸಿಎಂ

ಹಸಿವು ಮುಕ್ತ ರಾಜ್ಯವೇ ಕಾಂಗ್ರೆಸ್ ಸರಕಾರದ ಗುರಿ: ಸಿಎಂ
ಮೈಸೂರು , ಸೋಮವಾರ, 16 ಅಕ್ಟೋಬರ್ 2017 (14:12 IST)
ಒಂದು ಲಕ್ಷ ಜನರಿಗೆ ಒಂದರಂತೆ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು. ಹಸಿವು ಮುಕ್ತ ರಾಜ್ಯವೇ ನಮ್ಮ ಸರಕಾರದ ಗುರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ 12 ಲಕ್ಷ ಜನರಿರುವುದರಿಂದ 12 ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
 
ಇಂದಿರಾ ಕ್ಯಾಂಟಿನ್ ಜನಪ್ರಿಯತೆ ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ವಿಪಕ್ಷಗಳಿಗೆ ಬಡವರ ಹಸಿವು ನೀಗಿಸುವುದು ಬೇಕಾಗಿಲ್ಲ. ಕೇವಲ ರಾಜಕೀಯ ಮಾಡುವುದೇ ಅವರ ಕಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುತಗಳಿಸಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ವಿಪಕ್ಷಗಳ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಪ್ಲಾನ್ ಸಿಟಿಯೇ ಅಲ್ಲ: ಜಾರ್ಜ್