Select Your Language

Notifications

webdunia
webdunia
webdunia
webdunia

ಭಜನೆ ನಡೆಯುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಟ್ಟ ಹನುಮ

 ಕೋತಿ

geetha

ವಿಜಯಪುರ , ಮಂಗಳವಾರ, 23 ಜನವರಿ 2024 (20:06 IST)
ವಿಜಯಪುರ :ವಿಜಯಪುರದ  ಇಂಚಗೇರಿ ಮಠವು ಐತಿಹಾಸಿಕವಾಗಿಯೂ ಪ್ರಸಿದ್ದಿ ಹೊಂದಿದೆ. ಇಲ್ಲಿನ ಗುರುಗಳಾಗಿದ್ದ ಮಾಧವಾನಂದ ಶ್ರೀಗಳು ಬ್ರಿಟಿಷರ ವಿರುದ್ದ ಹೋರಾಡಿದ್ದು ಮಾತ್ರವಲ್ಲದೇ ಪವಾಡ ಪುರುಷರೆಂದೂ ಸಹ ಪ್ರಸಿದ್ದರಾಗಿದ್ದರು. 

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದ್ದ ವೇಳೆ ಭಜನಾ ಕಾರ್ಯಕ್ರಮ ನಡೆಸುತ್ತಿದ್ದ ವಿಜಯಪುರದ ಇಂಚಗೇರಿ ಮಠಕ್ಕೆ ಕೋತಿಯೊಂದು ಆಗಮಿಸಿ ಭಕ್ತಾದಿಗಳಲ್ಲಿ ಅಚ್ಚರಿ ಮೂಡಿಸಿದೆ. ರಾಮನ ಮುಂದೆ ಪ್ರಸಾದವಾಗಿ ಇರಿಸಿದ್ದ ಬಾಳೆಹಣ್ಣಿಗೆ ಕೈಹಾಕಿದ ಕೋತಿಯನ್ನು ನೋಡಿ ಭಕ್ತಾದಿಗಳು ಕೈಮುಗಿದಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. 

ಮಾಧವಾನಂದ ಶ್ರೀಗಳ ಗದ್ದುಗೆ ಎದುರಿನಲ್ಲ ಭಜನಾ ಕಾರ್ಯ ಏರ್ಪಡಿಸಲಾಗಿತ್ತು. ಅಲ್ಲಿಯೇ ಕೋತಿ ಆಗಮಿಸಿದ್ದು, ಭಕ್ತಾದಿಗಳಲ್ಲಿ ಸಂತಸ ಅಚ್ಚರಿ ಮೂಡಿಸಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆ ಮರಿಗಳಿಗೆ ಜನ್ಮ ನೀಡಿದ ಜ್ವಾಲಾ