Select Your Language

Notifications

webdunia
webdunia
webdunia
webdunia

ಸರಕಾರಿ ಬಸ್ ಚಾಲನೆ ಮಾಡಿದ ಶಾಸಕ..!

ಸರಕಾರಿ ಬಸ್ ಚಾಲನೆ ಮಾಡಿದ ಶಾಸಕ..!
ಹರಿಹರ , ಸೋಮವಾರ, 2 ಜುಲೈ 2018 (21:10 IST)
ಆ ಗ್ರಾಮಕ್ಕೆ ಹಲವು ದಶಕಗಳಿಂದ ಸರಕಾರಿ ಬಸ್ ಬಂದಿದ್ದಿಲ್ಲ. ಹೀಗಾಗಿ ಗ್ರಾಮಸ್ಥರ ಕೋರಿಕೆ ಸರಕಾರ ಸ್ಪಂದಿಸಿದೆ. ಸಾರಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಆ ಕುಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಅಂದಹಾಗೆ ಶಾಸಕರೇ ಸ್ವತಃ ಸರಕಾರಿ ಬಸ್ ಚಾಲನೆ ಮಾಡಿಕೊಂಡು ಚಲಾಯಿಸಿದ್ದು ವಿಶೇಷವಾಗಿತ್ತು. 
 
ಹರಿಹರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಸರಕಾರಿ ಬಸ್ ಚಾಲನೆ ಮಾಡಿ ಗಮನ ಸೆಳೆದಿದ್ದಾರೆ. ಕೆಲವು ವರ್ಷಗಳಿಂದ ನಾಗೇನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯ ಇರಲಿಲ್ಲ.

ನಾಗೇನಹಳ್ಳಿ ಮಾತ್ರವಲ್ಲ ಸುತ್ತಮುತ್ತಲಿನ ಗ್ರಾಮಗಳಿಗೂ ಬಸ್ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಾಸಕ ಎಸ್.ರಾಮಪ್ಪ ಅವರು ಸರಕಾರಿ ಬಸ್ ಚಾಲನೆ ಮಾಡಿಕೊಂಡು ಗ್ರಾಮಗಳಿಗೆ ಬಂದು ಗಮನ ಸೆಳೆದರು. ಬಸ್ ಹಾಗೂ ಶಾಸಕರನ್ನು ಕಂಡು ಜನರು ಸಂತಸಗೊಂಡರು. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯ ಇಲಾಖಾಧಿಕಾರಿಗೆ ಎಸಿಬಿ ಶಾಕ್