Select Your Language

Notifications

webdunia
webdunia
webdunia
webdunia

ನಾಳೆಯೊಳಗೆ ಕಾರ್ಯಕರ್ತರಿಗೆ ಸಂತಸದ ಸುದ್ದಿ: ಎಚ್‌ಡಿ ಕುಮಾರಸ್ವಾಮಿ

HD Kumaraswamy

Sampriya

ಬೆಂಗಳೂರು: , ಸೋಮವಾರ, 25 ಮಾರ್ಚ್ 2024 (14:01 IST)
HD Kumaraswamy
ಬೆಂಗಳೂರು: ಹೃದಯದ ಯಶಸ್ವಿ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಬಂದಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯಕರ್ತರನ್ನು ಮನೆಯಲ್ಲಿ ಭೇಟಿಯಾದರು.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಎಚ್‌ಡಿಕೆ ಅವರು,  ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ 3ನೇ ಬಾರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿದ ನನ್ನನ್ನು ಮಂಡ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ @JanataDal_S
 ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಗೂ ಹಿತೈಷಿಗಳು ಭೇಟಿಯಾಗಿ ಶುಭ ಕೋರಿದರು. ಹೆಚ್ಚು ಹೊತ್ತು ಮಾತನಾಡಬಾರದು, ಆಯಾಸ ಮಾಡಿಕೊಳ್ಳಬಾರದು ಎಂಬ ವೈದ್ಯರ ಕಟ್ಟಪ್ಪಣೆಯನ್ನು ಸ್ವಲ್ಪ ಮಟ್ಟಿಗೆ ಮೀರಿ ನನ್ನವರ ಜತೆ ಮಾತನಾಡಿದೆ.

ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದೆ.

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸಿ ನನ್ನ ಮೇಲೆ ಎಣೆಯಿಲ್ಲದ ಪ್ರೀತಿ, ವಾತ್ಸಲ್ಯ ತೋರಿದ ನನ್ನ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದೇನೆ ಹಾಗೂ ನಾಳೆ ಸಂಜೆಯೊಳಗೆ ನಿಮಗೆ ನಿರಾಶೆ ಆಗದಂತಹ ಒಳ್ಳೆಯ ನಿರ್ಧಾರವನ್ನು ಪಕ್ಷ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ್ದೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಜೊತೆಗೆ ಮತ್ತೆ ವಾಣಿಜ್ಯ ಸಂಬಂಧಕ್ಕೆ ನಾವು ರೆಡಿ ಎಂದ ಪಾಕಿಸ್ತಾನ