Select Your Language

Notifications

webdunia
webdunia
webdunia
webdunia

ಬಿಎಸ್ ವೈಗೆ ಗೋವಾ ಸಿಎಂ ಬರೆದಿದ್ದು ಲವ್ ಲೆಟರ್ ಅಂತೆ!

ಬಿಎಸ್ ವೈಗೆ ಗೋವಾ ಸಿಎಂ ಬರೆದಿದ್ದು ಲವ್ ಲೆಟರ್ ಅಂತೆ!
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (08:35 IST)
ಬೆಂಗಳೂರು: ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದಿದ್ದು ಮಹದಾಯಿ ನದಿ ನೀರಿನ ಕುರಿತಾದ ಪತ್ರವಲ್ಲ, ಲವ್ ಲೆಟರ್ ಎಂದು ಸಚಿವ ಎಚ್. ಆಂಜನೇಯ ಲೇವಡಿ ಮಾಡಿದ್ದಾರೆ.
 

ಮಹದಾಯಿ ನದಿ ನೀರಿನ ಸಮಸ್ಯೆ ಬಗ್ಗೆ ಗೋವಾ ಸಿಎಂ ಪರಿಕ್ಕರ್, ಕರ್ನಾಟಕ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆಯಬೇಕಿತ್ತು. ಅದು ಬಿಟ್ಟು ಯಡಿಯೂರಪ್ಪನವರಿಗೆ ಯಾಕೆ ಬರೆದರು? ಇದು ಅವರಿಬ್ಬರ ನಡುವಿನ ಲವ್ ಲೆಟರ್ ಎಂದು ಸಚಿವ ಆಂಜನೇಯ  ಟೀಕಿಸಿದ್ದಾರೆ.

ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಸಿಎಂಗಳು ಜತೆಯಾಗಿ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಚರ್ಚಿಸಿ ತಮ್ಮ ರಾಜ್ಯಕ್ಕೆ ಎಷ್ಟು ನೀರು ಬಿಡಬೇಕು ಎಂಬುದನ್ನು ತೀರ್ಮಾನಿಸಬೇಕು. ಇದರ ಹೊರತು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾಫಿಕ್ ನಿಯಂತ್ರಿಸಲು ಈ ಪೊಲೀಸ್ ಅಧಿಕಾರಿ ರಸ್ತೆ ಮಧ್ಯದಲ್ಲೇ ನೃತ್ಯ ಮಾಡ್ತಾರೆ! (ವಿಡಿಯೋ)