Select Your Language

Notifications

webdunia
webdunia
webdunia
webdunia

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ
ಬೆಂಗಳೂರು , ಶುಕ್ರವಾರ, 10 ಆಗಸ್ಟ್ 2018 (14:24 IST)
ಒಂದೇ ಹುಡುಗಿಯ ವಿಷಯವಾಗಿ ಮೂವರು ಯುಕವರು ಕಿತ್ತಾಡಿಕೊಂಡಿದ್ದಾರೆ. ಮೂವರ ಜಗಳದಲ್ಲಿ ಒಬ್ಬ ಕೊಲೆಯಾಗಿ ಹೋಗಿದ್ದಾನೆ.

ಯುವತಿಯೊಬ್ಬಳ ವಿಷಯಕ್ಕೆ ಸಂಬಂಧಿಸಿದಂತೆ ಮೂವರು ನಸಿಂಗ್ ವಿದ್ಯಾರ್ಥಿಗಳು ಜಗಳವಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಒಬ್ಬನ ಸಾವಿನಲ್ಲಿ ಅಂತ್ಯಕಂಡ ಘಟನೆ ಬೆಂಗಳೂರಿನ ವಿವಿ ಪುರಂನಲ್ಲಿ ನಡೆದಿದೆ.

ಗುಜರಾಜ್ ಮೂಲದ ರೋನಕ ಚಾನರಿ(24) ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾನೆ. ಪ್ರಕರಣ ಸಂಬಂಧ ರಾನಲ್ ಚಾನರಿ ಹಾಗೂ ಅಪೂರ್ವ ಚಾನರಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೋಟೆಲ್ ರೂಂ ಒಂದರಲ್ಲಿ ಉಳಿದುಕೊಂಡಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಯುವತಿಯೊಬ್ಬಳ ವಿಷಯಕ್ಕೆ ಸಂಬಂಧಿಸಿದಂತೆ ಕಿತ್ತಾಡಿಕೊಂಡಿದ್ದಾರೆ. ಘಟನೆಯಲ್ಲಿ ರೋನಕ ಚಾನರಿ ಸಾವನ್ನಪ್ಪಿದ್ದಾನೆ. ಈ ಕುರಿತು ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ಹಲವು ಯೋಜನೆ ಜಾರಿ