Select Your Language

Notifications

webdunia
webdunia
webdunia
webdunia

ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆಗೆ ಮುಂದಾದ ರೈತರು. ಕಾರಣವೇನು ಗೊತ್ತಾ?

ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆಗೆ ಮುಂದಾದ ರೈತರು. ಕಾರಣವೇನು ಗೊತ್ತಾ?
ಬೆಳಗಾವಿ , ಬುಧವಾರ, 20 ಫೆಬ್ರವರಿ 2019 (10:48 IST)
ಬೆಳಗಾವಿ : ಸುಮಾರು 10ಕೋಟಿವರೆಗೆ ಖರ್ಚು ಮಾಡಿ ಶೀಘ್ರದಲ್ಲಿ ತಮ್ಮ ಮಗಳ  ಮದುವೆ ಮಾಡಲು ಹೊರಟ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ವಿರುದ್ಧ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.


ಸುಮಾರು ಒಂದೂವರೆ ತಿಂಗಳು ಕ್ಷೇತ್ರದ ಜನರನ್ನ ಮರೆತು ಮುಂಬೈನಲ್ಲಿ ಐಷಾರಾಮಿ ಹೋಟೆಲ್‍ನಲ್ಲಿ ತಂಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸುಮಾರು 10ಕೋಟಿವರೆಗೆ ಖರ್ಚು ಮಾಡಿ ಶೀಘ್ರದಲ್ಲೇ ಮಗಳ ಮದುವೆ ಮಾಡಲು ಹೊರಟಿದ್ದಾರೆ. ಆದರೆ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿರುವ ರೈತರಿಗೆ ಕೊಡಬೇಕಾದ ಕೇವಲ 5ಕೋಟಿ ಹಣ ಕೊಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಶಾಸಕರು ಕೂಡಲೇ ನಮ್ಮ ಬಾಕಿ ಹಣ ಪಾವತಿಸಬೇಕು, ಇಲ್ಲವಾದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಬೆಂಗಳೂರಿನಲ್ಲಿ ಏರ್ ಶೋ 2019ಕ್ಕೆ ಚಾಲನೆ