Select Your Language

Notifications

webdunia
webdunia
webdunia
webdunia

ಕಾಲುವೆ ನೀರಿಗಾಗಿ ಹೆದ್ದಾರಿ ತಡೆ ನಡೆಸಿದ ರೈತರು!

ಕಾಲುವೆ ನೀರಿಗಾಗಿ ಹೆದ್ದಾರಿ ತಡೆ ನಡೆಸಿದ ರೈತರು!
ಮಂಡ್ಯ , ಬುಧವಾರ, 26 ಡಿಸೆಂಬರ್ 2018 (16:03 IST)
ಕಾಲುವೆಗೆ ನೀರು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ರೈತರು ಕಾಲುವೆ ನೀರು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಸಣ್ಣ ನೀರಾವರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.

ಸಣ್ಣ ನೀರಾವರಿ ಸಚಿವ ಸಿ.ಎಸ್.  ಪುಟ್ಟರಾಜು ವಿರುದ್ಧ ಗರಂ ಆಗಿರುವ ರೈತರು, ನೀರಾವರಿ ಇಲಾಖೆಗೆ ಬೀಗ ಜಡಿದು ಆಕ್ರೋಶ ಹೊರಹಾಕಿದರು.

ಮದ್ದೂರು ಪಟ್ಟಣದ ಟಿಬಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಕೂಡಲೇ ಕಾಲುವೆಗೆ ನೀರು ಬಿಡುಗಡೆಗೊಳಿಸುವಂತೆ ಒತ್ತಾಯ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಆ ಶಾಸಕ ಭೇಟಿ ನೀಡಿದ್ದೆಲ್ಲಿ ಗೊತ್ತಾ?