Select Your Language

Notifications

webdunia
webdunia
webdunia
webdunia

ನಾಟಿ ಮಾಡಲು ಕೂಲಿಗೆ ಬನ್ನಿ ಎಂದು ಸಿಎಂ ಎಚ್ ಡಿಕೆಗೇ ಆಹ್ವಾನ ನೀಡಿದ ರೈತ!

ನಾಟಿ ಮಾಡಲು ಕೂಲಿಗೆ ಬನ್ನಿ ಎಂದು ಸಿಎಂ ಎಚ್ ಡಿಕೆಗೇ ಆಹ್ವಾನ ನೀಡಿದ ರೈತ!
ಮಂಡ್ಯ , ಶುಕ್ರವಾರ, 10 ಆಗಸ್ಟ್ 2018 (11:29 IST)
ಮಂಡ್ಯ: ರೈತರನ್ನು ಹುರಿದುಂಬಿಸಲು ನಾಟಿ ಮಾಡಲು ಗದ್ದೆಗೆ ಇಳಿಯಲು ಹೊರಟಿರುವ ಸಿಎಂ ಕುಮಾರಸ್ವಾಮಿಗೆ ಮಂಡ್ಯದ ರೈತನೊಬ್ಬ ಸವಾಲು ಹಾಕಿದ್ದಾನೆ.
 

ರೈತರನ್ನು ಹುರಿದುಂಬಿಸಲು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸಲಿದ್ದಾರೆ.

ಈ ವಿಚಾರದ ಬಗ್ಗೆ ರೈತರೊಬ್ಬರು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ವ್ಯಂಗ್ಯ ಮಾಡಿದ್ದು, ತಮ್ಮ ಗದ್ದೆಗೆ ಮುಯ್ಯಾಳಾಗಿ ಕೆಲಸ ಮಾಡಲು ಬರುವಂತೆ ಆಹ್ವಾನ ನೀಡಿದ್ದಾರೆ. ನಿಮ್ಮನ್ನು ಕೆಲಸಕ್ಕೆ ಕರೆಸಿ ಕೂಲಿ ಕೊಡಲು ನಮ್ಮಲ್ಲಿ ದುಡ್ಡಿಲ್ಲ. ಹಾಗಾಗಿ ಮುಯ್ಯಾಳಾಗಿ ಬರಲು ಆಹ್ವಾನ ನೀಡಿದ್ದಾರೆ. ನಾಟಿ ಮಾಡುವುದರಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ. ರೈತರ ಬಗ್ಗೆ ನಿಜವಾಗಿ ಕಾಳಜಿಯಿದ್ದರೆ ಮೈ ಷುಗರ್ ಕಾರ್ಖಾನೆ ಪುನರಾರಂಭಿಸಿ ಎಂದು ಈ ವ್ಯಕ್ತಿ ಸವಾಲು ಹಾಕಿದ್ದಾರೆ. ಈತ ಬಿಜೆಪಿ ಕಾರ್ಯಕರ್ತ ಕೂಡಾ ಎಂಬ ಸುದ್ದಿಯೂ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದ ಡಿಸಿಎಂ ಪರಮೇಶ್ವರ್