Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಹೃದಯ ಬಗೆದರೆ ಶೋಭಕ್ಕನೇ ಇರ್ತಾರೆ!

BS Yediyurappa Shobha Karandlaje

Krishnaveni K

ಬೆಂಗಳೂರು , ಶನಿವಾರ, 16 ಮಾರ್ಚ್ 2024 (13:48 IST)
ಬೆಂಗಳೂರು: ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕೆಎಸ್ ಈಶ್ವರಪ್ಪ ಬೆಂಬಲಿಗರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪನವರಿಂದಲೇ ಈಶ್ವರಪ್ಪಗೆ ಮತ್ತು ಅವರ ಪುತ್ರ ಕಾಂತೇಶ್ ಗೆ ಟಿಕೆಟ್ ಕೈ ತಪ್ಪಿ ಹೋಗಿದೆ ಎಂಬುದು ಅವರ ಬೆಂಬಲಿಗ ಆಕ್ರೋಶ. ಇದೇ ಕಾರಣಕ್ಕೆ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಎದೆ ಬಗೆದರೆ ಶೋಭಕ್ಕನೇ ಕಾಣ್ತಾರೆ ಎಂದು ಈಶ್ವರಪ್ಪ ಬೆಂಬಲಿಗರು ವ್ಯಂಗ್ಯ ಮಾಡಿದ್ದಾರೆ.

ಈ ಮೊದಲು ಈಶ್ವರಪ್ಪ ಕೂಡಾ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ತಮಗೆ ಬೇಕಾದ ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಿದರು ಎಂದಿದ್ದರು. ಇದೀಗ ಈಶ್ವರಪ್ಪ ಬೆಂಬಲಿಗರೂ ಶೋಭಾ ಕರಂದ್ಲಾಜೆ ವಿರುದ್ಧ ಕುಹುಕವಾಡಿದ್ದಾರೆ.

ಬೆಂಬಲಿಗರನ್ನುದ್ದೇಶಿಸಿ ಈಶ್ವರಪ್ಪ ಮಾತನಾಡುವಾಗ ನನ್ನ ಹೃದಯಲ್ಲಿ ಮೋದಿ ಇದ್ದಾರೆ ಎಂದು ಈಶ್ವರಪ್ಪ ಹೇಳಿದ್ದರು. ಇದಕ್ಕೆ ಧ್ವನಿಗೂಡಿಸಿದ ಬೆಂಬಲಿಗರು ಯಡಿಯೂರಪ್ಪ ಎದೆ ಬಗೆದರೆ ಶೋಭಕ್ಕ ಇರ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಆ ಮೂಲಕ ಶೋಭಾ ಕರಂದ್ಲಾಜೆ ಜೊತೆಗೆ ಯಡಿಯೂರಪ್ಪನವರಿಗಿರುವ ಆತ್ಮೀಯತೆಯನ್ನು ಕುಹುಕ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಈಗ್ಯಾಕೆ ನಮ್ಮ ರಾಜ್ಯಕ್ಕೆ ಬಂದ್ರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ