Select Your Language

Notifications

webdunia
webdunia
webdunia
webdunia

ದಾವಣಗೆರೆಯಲ್ಲಿ ಮತ್ತೆ ಕಾಡಾನೆಗಳ ದಾಳಿ

ದಾವಣಗೆರೆಯಲ್ಲಿ ಮತ್ತೆ ಕಾಡಾನೆಗಳ ದಾಳಿ
ದಾವಣಗೆರೆ , ಗುರುವಾರ, 14 ಡಿಸೆಂಬರ್ 2017 (14:18 IST)
ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ದಾಳಿ ನಡೆಸಿವೆ.


ಕಾಡಾನೆ ದಾಳಿಯಿಂದ ದೇವರ ಹೊನ್ನಾಳಿ ಗ್ರಾಮದ ಭರಮಪ್ಪ ಹಾಗೂ ಬೆನಕನ ಹಳ್ಳಿಯ ಮಳಲಿ ರಾಜಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು , ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ದೇವರ ಹೊನ್ನಾಳಿಯಲ್ಲಿ ಆನೆ ದಾಳಿಯಿಂದ 2 ಹಸುಗಳಿಗೆ ತೀವ್ರ ಗಾಯಗಳಾಗಿವೆ.


ಈ ಕಾಡಾನೆಗಳ ದಾಳಿಗೆ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡದಲ್ಲಿ ಒಬ್ಬ ವೃದ್ಧೆ ಸಾವನಪ್ಪಿದ್ದಾರೆ. ರುದ್ರಿಬಾಯಿ ಸಾವನಪ್ಪಿದ ವೃದ್ಧೆ. ಅವರು ಮನೆ ಮುಂದೆ  ಕುಳಿತಿದ್ದಾಗ ಆನೆಗಳು ದಾಳಿ ನಡೆಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ನರೇಂದ್ರಮೋದಿ