Select Your Language

Notifications

webdunia
webdunia
webdunia
webdunia

21 ವರ್ಷದ ಯುವತಿಗೆ ನೀಡುತ್ತಿರುವ ಅಮಾನವೀಯ ಶಿಕ್ಷೆ ಎಂಥದ್ದು ಗೊತ್ತಾ?

21 ವರ್ಷದ ಯುವತಿಗೆ ನೀಡುತ್ತಿರುವ ಅಮಾನವೀಯ ಶಿಕ್ಷೆ ಎಂಥದ್ದು ಗೊತ್ತಾ?
ಚಿತ್ರದುರ್ಗ , ಗುರುವಾರ, 19 ಜುಲೈ 2018 (14:16 IST)
ಆಕೆ 21 ವರ್ಷದ ಯುವತಿ. ಆದರೆ ಕಳೆದ ಹಲವು ವರ್ಷಗಳಿಂದ ಆಕೆ ಅಮಾನವೀಯ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ. ತನ್ನದಲ್ಲದ ತಪ್ಪಿಗೆ ಕಠೋರವಾಗಿ ಜೀವನ ನಡೆಸುತ್ತಿದ್ದಾಳೆ.

 ಚಿತ್ರದುರ್ಗ ಜಿಲ್ಲೆಯ ಕೋನಾಪುರ ಗ್ರಾಮದಲ್ಲಿ ಮಹಿಳೆಗೆ ಅಮಾನವೀಯ ಶಿಕ್ಷೆ ನೀಡಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮೊಳಕಾಲ್ಮೂರು ತಾಲೂಕಿನ ಗ್ರಾಮ ಕೋನಾಪುರದಲ್ಲಿ 21 ವರ್ಷದ ಸರಸ್ವತಿ ಕಾಲಿಗೆ ಸರಪಳಿ ಮೂಲಕ ಮರದ ತುಂಡು ಬಿಗಿದು ಶಿಕ್ಷೆ ನೀಡಲಾಗುತ್ತಿದೆ. ಸುಮಾರು ವರ್ಷಗಳಿಂದ ಸರಸ್ವತಿಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಕೋನಾಪುರ ಗ್ರಾಮಸ್ಥರು ತಿಳಿಸಿದ್ದಾರೆ.

ಮಾನಸಿಕ ಖಿನ್ನತೆಗೆ ಒಳಗಾಗಿರುವ ಸರಸ್ವತಿ, ಜನರೊಂದಿಗೆ ಜಗಳಕ್ಕಿಯುವ ವಿಚಿತ್ರ ಮನೋಸ್ಥಿತಿ ಹೊಂದಿದ್ದಾಳೆ. ಸರಸ್ವತಿಯ ಖಿನ್ನತೆಗೆ ಚಿಕಿತ್ಸೆ ಕೊಡಿಸಲಾಗದೆ ಕಾಲಿಗೆ ಮರದ ತುಂಡನ್ನು ಪೋಷಕರು ಕಟ್ಟಿದ್ದಾರೆ. ಹೀಗಾಗಿ ತನ್ನದಲ್ಲದ ತಪ್ಪಿಗೆ ಮರದ ತುಂಡನ್ನು ಕಾಲಿಗೆ ಕಟ್ಟಿಕೊಂಡು ಸರಸ್ವತಿ ನರಳುತ್ತಾ ಅಲೆದಾಡುವಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಡಿಕ್ಷನರಿಯಲ್ಲೇ ದ್ವೇಷ ಎನ್ನುವ ಪದವಿಲ್ಲ ಎಂದ ಕಾಂಗ್ರೆಸ್ ಹಿರಿಯ ನಾಯಕ