Select Your Language

Notifications

webdunia
webdunia
webdunia
webdunia

ಮೀ ಟೂ ಕುರಿತು ಹಿರಿಯ ಚಿತ್ರನಟಿ ಉಮಾಶ್ರೀ ಹೇಳಿದ್ದೇನು ಗೊತ್ತಾ?

ಮೀ ಟೂ ಕುರಿತು ಹಿರಿಯ ಚಿತ್ರನಟಿ ಉಮಾಶ್ರೀ ಹೇಳಿದ್ದೇನು ಗೊತ್ತಾ?
ಕುಂದಾಪುರ , ಭಾನುವಾರ, 4 ನವೆಂಬರ್ 2018 (16:37 IST)
ನನ್ನ ಚಿತ್ರರಂಗ ಜೀವನದಲ್ಲಿ ಇದುವರೆಗೂ ಕೆಟ್ಟ ಅನುಭವವಾಗಿಲ್ಲ. ಆಗಿದ್ದಿದ್ದರೆ ನನ್ನದು ಅಲ್ಲೆ ಡ್ರಾ, ಅಲ್ಲೇ ಬಹುಮಾನ ಎಂದು ಹಿರಿಯ ಚಿತ್ರನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಕುಂದಾಪುರದಲ್ಲಿ ಮೀ ಟೂ ಅಭಿಯಾನದ ಕುರಿತು ಹಿರಿಯ ಚಿತ್ರನಟಿ ಉಮಾಶ್ರೀ ಹೇಳಿಕೆ ನೀಡಿದ್ದು,  ನನಗೆ ಯಾವ ಪುರುಷನಿಂದ ಸಮಸ್ಯೆಯಾಗಿಲ್ಲ. ಆಗಿದ್ದರೆ ಅಲ್ಲಿಯೇ ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದೆ. ಮೀ ಟೂ ಅಭಿಯಾನದ ಉದ್ದೇಶ ನೋವನ್ನು ಹೇಳಿಕೊಳ್ಳುವುದು. ಇದರಿಂದ ಯಾರ ತೇಜೋವಧೆಯಾಗಬಾರದು. ಸರ್ಜಾ ಪ್ರಕರಣ ಕೋರ್ಟ್ ನಲ್ಲಿದೆ.  ನಾನು ಪ್ರತಿಕ್ರಿಯಿಸಲ್ಲ ಎಂದರು.

ಮೀ ಟೂ ಇದರಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರಲ್ಲ. ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಟಿ ಉಮಾಶ್ರೀ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾಸ್ವಾಮಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಕಿದ ಸವಾಲೇನು?