Select Your Language

Notifications

webdunia
webdunia
webdunia
webdunia

ಪ್ರಧಾನಿ ಸಹೋದರ ಪ್ರಲ್ಹಾದ ಮೋದಿ ಹೇಳಿದ್ದೇನು ಗೊತ್ತಾ?

ಪ್ರಧಾನಿ ಸಹೋದರ ಪ್ರಲ್ಹಾದ ಮೋದಿ ಹೇಳಿದ್ದೇನು ಗೊತ್ತಾ?
ಗದಗ , ಶನಿವಾರ, 28 ಜುಲೈ 2018 (16:54 IST)
ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸದಲ್ಲಿರುವ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಅವರ ಆಗಮನದ ಉದ್ದೇಶ ಕುರಿತು ಹೇಳಿಕೊಂಡಿದ್ದಾರೆ.

ಗದಗ ನಗರಕ್ಕೆ  ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರ್ಯಕರ್ತರನ್ನು ಭೇಟಿ ಮಾಡಿದರು. ಪ್ರಹ್ಲಾದ್ ಮೋದಿ, ಅಖಿಲ ಭಾರತ ಪಡಿತರ ವಿತರಕರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

ನಗರದ ಕೆಸಿ ರಾಣಿ ರಸ್ತೆಯ ಡಾ. ಶೇಖರ್ ಸಜ್ಜನರ್ ಮನೆಗೆ ಭೇಟಿನೀಡಿ ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಬಳ್ಳಾರಿನಲ್ಲಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜ್ ನಿಧನ ಹಿನ್ನಲೆ, ಕುಟುಂಬಕ್ಕೆ ಸಾಂತ್ವಾನ ಹೇಳುಲು ಆಗಮಿಸಿದ್ದೇನೆ.

ಧಾರವಾಡ ಜಿಲ್ಲೆನಲ್ಲಿ ನಡೆಯುವ ರಾಷ್ಟ್ರೀಯ ಗಾಣಿಗ ಮಹಾಸಭಾದ ಸಮಾವೇಷದಲ್ಲಿ ಪಾಲ್ಗೊಳ್ಳುವಂತೆ, ಗಾಣಿಗ ಸಭೆಗೆ ನಮ್ಮ ಸಮಾಜದ ಜನ ಆಮಂತ್ರಣ ನೀಡಿದ್ದಾರೆ. ಹೀಗಾಗಿ ಇಲ್ಲಿಗೆ ಬಂದಿದ್ದು, ಎರಡೂ ಕೆಲಸ ಮೂಲಕ ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷನಿಂದಲೇ 29 ಬಾಲಕಿಯರ ಮೇಲೆ ಅತ್ಯಾಚಾರ