Select Your Language

Notifications

webdunia
webdunia
webdunia
webdunia

ಹೂ ಮಾರುವ ಬಾಲಕಿಯ ನೆರವಿಗೆ ಮುಂದಾದ ಸಿಎಂ

ಹೂ ಮಾರುವ ಬಾಲಕಿಯ ನೆರವಿಗೆ ಮುಂದಾದ ಸಿಎಂ
ಮಂಡ್ಯ , ಗುರುವಾರ, 27 ಸೆಪ್ಟಂಬರ್ 2018 (17:29 IST)
ಮಾರ್ಗ ಮಧ್ಯೆ ಕಾರು ನಿಲ್ಲಿಸಿ ರಸ್ತೆ ಬದಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಮಾತನಾಡಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೊಟ್ಟ ಭರವಸೆಯಂತೆ ಬಾಲಕಿಯ ನೆರವಿಗೆ ಮುಂದಾಗಿದ್ದಾರೆ.

ಮಂಡ್ಯ ಜಿಲ್ಲಾ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮಂಡ್ಯಕ್ಕೆ ಆಗಮಿಸಿದ್ದ ಸಿಎಂ ಹೆಚ್ಡಿಕೆ, ಕೆಲಹೊತ್ತು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಜನರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಾಲಕಿ ಶಬಾಬ್ ತಾಜ್ ಳನ್ನು ತನ್ನ ಬಳಿ ಕರೆಸಿಕೊಂಡು ಯೋಗಕ್ಷೇಮ ವಿಚಾರಿಸಿದ ಸಿಎಂ, ಬಾಲಕಿಯ ವಿದ್ಯಾಭ್ಯಾಸದ ಸಂಪೂರ್ಣ ಜವಬ್ದಾರಿ ಹೊರುವುದಾಗಿ ಹೇಳಿದರು. ಆಕೆಯ ಕುಟುಂಬಕ್ಕೆ ನಿವೇಶನ ನೀಡೋದರ ಜೊತೆಗೆ ಆರ್ಥಿವಾಗಿ ನೆರವು ನೀಡುವ ಭರವಸೆ ನೀಡಿದ್ದಾರೆ.

ಇನ್ನೂ ಸಿಎಂ ಕುಮಾರಸ್ವಾಮಿ ಮಾತುಗಳಿಂದ ಸಂತಸಗೊಂಡಿರುವ ಬಾಲಕಿ ಶಬಾಬ್ ತಾಯಿ ಮಸೂದ ಬಾನು, ಸಿಎಂ‌ ಅವ್ರು ನಮಗೆ ಮನೆ ನೀಡುವ ಭರವಸೆ ನೀಡಿದ್ದು ಖುಷಿ ತಂದಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಹೃದಯ ದಿನಕ್ಕೆ ಉಚಿತ ಆರೋಗ್ಯ ತಪಾಸಣೆ