Select Your Language

Notifications

webdunia
webdunia
webdunia
webdunia

ಅಂತೂ ರೆಸಾರ್ಟ್ ನಿಂದ ಹೊರ ಬಂದ ಸಿದ್ದರಾಮಯ್ಯ!

ಅಂತೂ ರೆಸಾರ್ಟ್ ನಿಂದ ಹೊರ ಬಂದ ಸಿದ್ದರಾಮಯ್ಯ!
ಮೈಸೂರು , ಶನಿವಾರ, 31 ಮಾರ್ಚ್ 2018 (08:56 IST)
ಮೈಸೂರು: ಚುನಾವಣೆ ರಣತಂತ್ರ ಹೆಣೆಯಲು ಖಾಸಗಿ ರೆಸಾರ್ಟ್ ನಲ್ಲಿ ವಿಶ್ರಾಂತಿಯಲ್ಲಿದ್ದ ಸಿಎಂ ಸಿದ್ದರಾಮಯ್ಯ ಕೊನೆಗೂ ರೆಸಾರ್ಟ್ ಬಿಟ್ಟು ಹೊರ ಬಂದಿದ್ದಾರೆ. ಇಂದು ಸ್ವ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಕುಟುಂಬ ಸಮೇತರಾಗಿ ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ  ಅವರಿಗೆ ಸೇರಿದ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದಾರೆ ಎನ್ನಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಆಪ್ತ ನಾಯಕರೊಂದಿಗೆ ಚರ್ಚೆ ನಡೆಸಲಿದ್ದರು. ಹಾಗೂ ಎಲ್ಲಾ ನಾಯಕರಿಗೆ ಭೇಟಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.

ಮುಂಬರುವ ಚುನಾವಣೆಗೆ ನಡೆಸಬೇಕಾದ ರೂಪು ರೇಷೆಗಳ ಬಗ್ಗೆ ಸಿಎಂ ತಮ್ಮ ಆಪ್ತರ ಜತೆ ಈ ಸಂದರ್ಭದಲ್ಲಿ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ಯುಸಿಯಾಗಿರುವುದರಿಂದ  ಅದಕ್ಕೂ ಮೊದಲು ತಮ್ಮ ಕುಟುಂಬ ವರ್ಗದವರೊಂದಿಗೆ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.

ಇಂದು ಸ್ವ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ  ಸುಮಾರು 22 ಗ್ರಾಮಗಳಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪುತ್ರ ಯತೀಂದ್ರ ಕೂಡಾ ಜತೆಗಿರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜು ಮನೆಗೆ ಹೋದ ಬಿಜೆಪಿ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿದರೇ?