Select Your Language

Notifications

webdunia
webdunia
webdunia
webdunia

ಚುನಾವಣೆ ಸಮಯದಲ್ಲಿ ಹೇಳಿದ್ದನ್ನೆಲ್ಲಾ ಮಾಡಕ್ಕಾಗುತ್ತಾ? ಸಿಎಂ ಸಿದ್ದರಾಮಯ್ಯ

ಚುನಾವಣೆ ಸಮಯದಲ್ಲಿ ಹೇಳಿದ್ದನ್ನೆಲ್ಲಾ ಮಾಡಕ್ಕಾಗುತ್ತಾ? ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಭಾನುವಾರ, 17 ಡಿಸೆಂಬರ್ 2023 (14:15 IST)
ಬೆಂಗಳೂರು: ಚುನಾವಣೆ ಸಮಯದಲ್ಲಿ ನಾವು ಏನೇನೋ ಆಶ್ವಾಸನೆಗಳನ್ನು ಕೊಡ್ತೀವಿ. ಅದನ್ನೆಲ್ಲಾ ಮಾಡಕ್ಕಾಗುತ್ತಾ? ಹೀಗಂತ ಹೇಳಿದ್ದು ಸಿಎಂ ಸಿದ್ದರಾಮಯ್ಯ.

ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಿಎಂ ಸಿದ್ದು ಈ ರೀತಿ ಉತ್ತರಿಸಿದ್ದಾರೆ. ಅವರ ಈ ಮಾತಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಎಲ್ಲಿಂದ ತರೋಣ ದುಡ್ಡು? ಎಲ್ಲಿಂದ ತರೋಣ ಹೇಳಿ? ಚುನಾವಣೆ ಸಮಯದಲ್ಲಿ ಏನೆಲ್ಲಾ ಹೇಳ್ತೀವಿ. ಅದನ್ನೆಲ್ಲಾ ಮಾಡಕ್ಕಾಗುತ್ತಾ?’ ಎಂದು ಸಿದ್ದು ಸದನದಲ್ಲಿಯೇ ಹೇಳಿದ್ದಾರೆ.

ಅವರ ಈ ಮಾತಿನ ವಿಡಿಯೋ ಈಗ ಬಿಜೆಪಿ ಬೆಂಬಲಿಗರಿಗೆ ಅಸ್ತ್ರವಾಗಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆ ಸಮಯದಲ್ಲಿ ಘೋಷಿಸಿದ್ದ ಗ್ಯಾರಂಟಿಗಳೆಲ್ಲಾ ಬೋಗಸ್ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಾಬೀತು ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ಖರೀದಿ ಎಡವಟ್ಟು: ಏಕಾಏಕಿ ಮನೆಮುಂದೆ ಆರು ಮಂದಿ ಡೆಲಿವರಿ ಏಜೆಂಟ್ ಗಳು!