Select Your Language

Notifications

webdunia
webdunia
webdunia
webdunia

ಬಿಜೆಪಿ ಸಮಾವೇಶಕ್ಕೆ ಬಂದವರು ಇಂದಿರಾ ಕ್ಯಾಂಟೀನಲ್ಲಿ ಊಟ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಎಂಥಾ ಪ್ರತಿಕ್ರಿಯೆ ಕೊಟ್ಟರು ಗೊತ್ತಾ?

ಬಿಜೆಪಿ ಸಮಾವೇಶಕ್ಕೆ ಬಂದವರು ಇಂದಿರಾ ಕ್ಯಾಂಟೀನಲ್ಲಿ ಊಟ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಎಂಥಾ ಪ್ರತಿಕ್ರಿಯೆ ಕೊಟ್ಟರು ಗೊತ್ತಾ?
ಬೆಂಗಳೂರು , ಬುಧವಾರ, 7 ಮಾರ್ಚ್ 2018 (10:52 IST)
ಬೆಂಗಳೂರು: ಮಂಗಳೂರಿನ ನೆಹರೂ ಮೈದಾನದಲ್ಲಿ ನಿನ್ನೆ ಬಿಜೆಪಿ ಯಾತ್ರೆಯ ಸಮಾವೇಶ ಸಮಾರಂಭ ನಡೆದಿತ್ತು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಆದರೆ ಸಮಾರಂಭಕ್ಕೆ ಬಂದವರು ಪಕ್ಕದಲ್ಲೇ ಇದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ನಾವು ಮನುಷ್ಯ ಪ್ರೇಮಿಗಳು. ಅವರು ಮನುಷ್ಯ ವಿರೋಧಿಗಳು. ಇದರಿಂದಾಗಿಯಾ ನಾವು ಹೀಗೆ. ಅವರು ಹಾಗೆ. ಉಂಡವನು ಶತ್ರುವಾದರೂ ಅವರ ಹೊಟ್ಟೆ ತಣ್ಣಗಿರಲಿ’ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಲಪಾಡ್ ಹಣೆಬರಹ ಇಂದು ನಿರ್ಧಾರ