Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಬರುತ್ತಾರೆ ಎಂದು ಗೊತ್ತಿದ್ದೇ ಆತ್ಮಹತ್ಯೆ ಮಾಡಿಕೊಂಡ: ರೈತನ ಬಗ್ಗೆ ಸಿಎಂ ಅನುಕಂಪ

ಮುಖ್ಯಮಂತ್ರಿ ಬರುತ್ತಾರೆ ಎಂದು ಗೊತ್ತಿದ್ದೇ ಆತ್ಮಹತ್ಯೆ ಮಾಡಿಕೊಂಡ: ರೈತನ ಬಗ್ಗೆ ಸಿಎಂ ಅನುಕಂಪ
ಮಂಡ್ಯ , ಶನಿವಾರ, 24 ನವೆಂಬರ್ 2018 (10:11 IST)
ಮಂಡ್ಯ: ತಮ್ಮ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರೈತ ಜೈಕುಮಾರ್ ಸಾವಿಗೆ ಸಿಎಂ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಭೇಟಿ ನೀಡುವ ದಿನವೇ ರೈತ ಜೈಕುಮಾರ್ ಮುಖ್ಯಮಂತ್ರಿಗಳ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜೈಕುಮಾರ್ ಕೃಷಿಯಲ್ಲೂ ನಷ್ಟ ಅನುಭವಿಸಿದ್ದ. ಹೀಗಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಇದನ್ನು ಭರಿಸಲಾಗದೇ, ಚಿಕಿತ್ಸೆಗೂ ಹಣ ಹೊಂದಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ‘ನನ್ನ ಬಳಿ ಬಂದಿದ್ದರೆ ನಾನೇ ಹಣ ಸಹಾಯ ಮಾಡುತ್ತಿದ್ದೆ ಮತ್ತು ಚಿಕಿತ್ಸೆಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದೆ. ಮುಖ್ಯಮಂತ್ರಿ ಬರುತ್ತಾರೆ ಎಂದು ತಿಳಿದು ಆತುರಪಟ್ಟು ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಅವರಿಗೆ ಖಾಯಿಲೆ ಇತ್ತು ಎನ್ನುವುದು ವಾರದ ಹಿಂದಷ್ಟೇ ಗೊತ್ತಾಗಿತ್ತು. ಕುಟುಂಬಕ್ಕೆ ಆರ್ಥಿಕ ಸಹಾಯವಾಗಬಹುದು ಎಂದು ಆತ್ಮಹತ್ಯೆ ದಾರಿ ಕಂಡುಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಶಾಸಕರಿಗೆ ತುರ್ತು ಸಭೆಗೆ ಕರೆಕೊಟ್ಟ ಸಿಎಂ ಕುಮಾರಸ್ವಾಮಿ