Select Your Language

Notifications

webdunia
webdunia
webdunia
webdunia

ದೇವಾಲಯಗಳಲ್ಲಿ ಹುಂಡಿ ಕದಿಯುತ್ತಿದ್ದವರ ಸೆರೆ!

ದೇವಾಲಯಗಳಲ್ಲಿ ಹುಂಡಿ ಕದಿಯುತ್ತಿದ್ದವರ ಸೆರೆ!
ಚಾಮರಾಜನಗರ , ಬುಧವಾರ, 23 ಜನವರಿ 2019 (15:26 IST)
ದೇಗುಲಗಳಲ್ಲಿ ಹುಂಡಿ ಸೇರಿದಂತೆ ದೇವರ ವಿಗ್ರಹಗಳನ್ನು ಕದಿಯುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಮೈಸೂರು ಜಿಲ್ಲೆಯ ಎರಡು ಹಾಗೂ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕುಗಳ 9 ದೇವಸ್ಥಾನಗಳಲ್ಲಿ ದೇವರ ವಿಗ್ರಹ ಸೇರಿದಂತೆ ಆಭರಣಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧನ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ತೊರವಳ್ಳಿಮೋಳೆ ಗ್ರಾಮದ ಮಹೇಶ್, ಮಹದೇವಸ್ವಾಮಿ, ಚಾಮರಾಜನಗರ ತಾಲೂಕಿನ ತೆಂಕಲಮೋಳೆ ಗ್ರಾಮದ ಮನುಕುಮಾರ್, ಸುರೇಶ್, ಅಶೋಕ್ ಎಂಬುವರನ್ನು ತೆರಕಣಾಂಬಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 2 ಲಕ್ಷ 70 ಸಾವಿರ ರೂ. ಬೆಲೆಬಾಳುವ ವಿಗ್ರಹದ ಮುಖವಾಡ, ಓಲೆಗಳು, ಬಳೆಗಳು, ಕಳಸ, ಚೊಂಬುಗಳು, ನಂದಿಕಂಬದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕುಟುಂಬದ 9 ಜನರ ಸಾವು: ಕುಟುಂಬದವರಿಗೆ ಸಾಂತ್ವನ