Select Your Language

Notifications

webdunia
webdunia
webdunia
webdunia

ಸರಕಾರ ಬದಲಾವಣೆ ಸಾಧ್ಯವಿಲ್ಲ ಎಂದ ಸಂಸದ!

ಸರಕಾರ ಬದಲಾವಣೆ ಸಾಧ್ಯವಿಲ್ಲ ಎಂದ ಸಂಸದ!
ಚಾಮರಾಜನಗರ , ಬುಧವಾರ, 16 ಜನವರಿ 2019 (14:07 IST)
ಒಂದು ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಆಸೆ- ಆಮಿಷಗಳನ್ನು ಒಡ್ಡುವುದು ಸರಿಯಲ್ಲ. ನಮ್ಮ‌ ಪಕ್ಷದ ಜನಪ್ರತಿನಿಧಿಗಳು ಇಂತಹ ಆಮಿಷಗಳಿಗೆ ಬಲಿಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಸರಕಾರ ಬದಲಾಗುವುದಿಲ್ಲ. ಹೀಗಂತ ಸಂಸದರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಚಾಮರಾಜನಗರದಲ್ಲಿ ಸಂಸದ ಆರ್.ದೃವನಾರಾಯಣ್ ಹೇಳಿಕೆ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. 4, 5 ಜನ ಯಾರು ಹೊರಗೆ ಹೋಗಿದ್ದಾರೆಯೋ ಅವರೆ ಅತೃಪ್ತ ಶಾಸಕರು. ಅವರನ್ನ ಈಗಾಗಲೇ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಎಲ್ಲರಿಗೂ ಮಂತ್ರಿಯಾಗುವ ಆಸೆ ಇದ್ದೇ ಇರುತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಜಾಸ್ತಿ ಇದ್ದಾರೆ ಅಷ್ಟೇ. 
ಕೆಲವು ಶಾಸಕರಿಗೆ ನಿಗಮ ಮಂಡಳಿಗಳು ಇದ್ದಾವೆ.  ಹಾಗಾಗಿ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಆಗೋದಿಲ್ಲ ಎಂದು ಹೇಳಿದರು.  

ಸರಕಾರ ಉರುಳಿಸುವ ಇಂತಹ ಪ್ರಯತ್ನಗಳನ್ನು ಬಿಜೆಪಿಯವರು ಮಾಡುವುದರಿಂದ ಅವರ ಪಕ್ಷಕ್ಕೇ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ – ಸಿಎಂ ಕುಮಾರಸ್ವಾಮಿ