Select Your Language

Notifications

webdunia
webdunia
webdunia
webdunia

ಇಂದು ಸಂಜೆ 4 ಗಂಟೆಗೆ ದೇವೇಗೌಡರ ಕುಟುಂಬದ ಹಗರಣ ಬಯಲು ಮಾಡುತ್ತಾರಂತೆ ಯಡಿಯೂರಪ್ಪ!

ಇಂದು ಸಂಜೆ 4 ಗಂಟೆಗೆ ದೇವೇಗೌಡರ ಕುಟುಂಬದ ಹಗರಣ ಬಯಲು ಮಾಡುತ್ತಾರಂತೆ ಯಡಿಯೂರಪ್ಪ!
ಬೆಂಗಳೂರು , ಗುರುವಾರ, 20 ಸೆಪ್ಟಂಬರ್ 2018 (13:07 IST)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ನಡುವಿನ ಏಟು-ಎದಿರೇಟು ಮುಂದುವರಿದಿದ್ದು ಇಂದು ಸಂಜೆ 4 ಗಂಟೆಗೆ ದೇವೇಗೌಡರ ಕುಟುಂಬದ ಹಗರಣ ಬಯಲು ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ.

ಯಡಿಯೂರಪ್ಪ ವಿರುದ್ಧ ಸಿಎಂ ಕುಮಾರಸ್ವಾಮಿ ಏಟಿಗೆ ಎದಿರೇಟು ನೀಡಿರುವ ಯಡಿಯೂರಪ್ಪ ‘ನನಗೆ ಏನು ಮಾತನಾಡಬೇಕೆಂದು ಗೊತ್ತಿದೆ. ನನ್ನ ವಿರುದ್ಧ ಯಾವುದೇ ತನಿಖೆಗೆ ನಾನು ಬಗ್ಗುವನಲ್ಲ. ಇಂದು ಸಂಜೆ 4 ಗಂಟೆಗೆ ನಮ್ಮ ಪಕ್ಷದ ನಾಯಕರು ದೇವೇಗೌಡರ ಕುಟುಂಬದ ಭೂಹಗರಣಗಳ ಮಾಹಿತಿಯನ್ನು ದಾಖಲೆ ಸಮೇತ ಬಯಲು ಮಾಡುತ್ತೇವೆ. ಮೈಸೂರಿನಲ್ಲಿ ಭೂಕಬಳಿಕೆ ಮಾಡಿ ನಿಮ್ಮ ಕುಟುಂಬದವರಿಗೆಲ್ಲಾ ಹಂಚಿದ್ದು ನಮಗೂ ಗೊತ್ತಿದೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

‘ರಾಜ್ಯದಲ್ಲಿ ನಿಮ್ಮ ಸರ್ಕಾರವಿರಬಹುದು. ಆದರೆ ಕೇಂದ್ರದಲ್ಲಿ ನಮ್ಮ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದೆ. ನೀವು ಏನು ಮಾಡಿದರೂ ಅದಕ್ಕೆ ಏನು ಮಾಡಬೇಕೆಂದು ನಮಗೂ ಗೊತ್ತಿದೆ’ ಎಂದು ಜಿದ್ದಾಜಿದ್ದಿನ ಮಾತನಾಡಿದ್ದಾರೆ. ಹೀಗಾಗಿ ಇಂದು ಸಂಜೆ ಬಿಜೆಪಿ ಹೊರ ಹಾಕಲಿರುವ ಮಾಹಿತಿಗಳ ಬಗ್ಗೆ ಕುತೂಹಲ ಮೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಮುಂದೂಡುತ್ತಿರುವುದರ ಬಗ್ಗೆ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದೇನು?