Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡರು 30 ಕೋಟಿ ರೂ. ಆಮಿಷ ಒಡ್ಡಿದ್ದು ಸುಳ್ಳು ಎಂದ ಜೆಡಿಎಸ್ ಶಾಸಕ

ಬಿಜೆಪಿ ಮುಖಂಡರು 30 ಕೋಟಿ ರೂ. ಆಮಿಷ ಒಡ್ಡಿದ್ದು ಸುಳ್ಳು ಎಂದ ಜೆಡಿಎಸ್ ಶಾಸಕ
ಬೆಂಗಳೂರು , ಶುಕ್ರವಾರ, 22 ಮಾರ್ಚ್ 2019 (13:55 IST)
ಬೆಂಗಳೂರು : ಬಿಜೆಪಿ ಮುಖಂಡರು 30 ಕೋಟಿ ರೂ. ಆಮಿಷ ಒಡ್ಡಿದ್ದು ಸುಳ್ಳು ಎಂದು ಹೇಳುವುದರ ಮೂಲಕ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಇದೀಗ ಉಲ್ಟಾ ಹೊಡೆದಿದ್ದಾರೆ.


ಮಾ. 18 ರಂದು ಎಸಿಬಿ ವಿಚಾರಣೆಗೆ ಹಾಜರಾಗಿದ್ದ ಶ್ರೀನಿವಾಸಗೌಡ, ನಾನು ಶೌಚಗೃಹಕ್ಕೆ ಹೋಗಿದ್ದಾಗ ಬಿಜೆಪಿ ಮುಖಂಡರು ಮನೆಗೆ ಬಂದು 5 ಕೋಟಿ ರೂ. ಇಟ್ಟು ಹೋಗಿದ್ದರು. ಉಳಿದ 25 ಕೋಟಿ ರೂ. ಕೊಡುವುದಾಗಿ ಹೇಳಿದ್ದರು ಎಂದು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು.


ಆದರೆ ಇದೀಗ ಆಪರೇಷನ್ ಕಮಲದಿಂದ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಬಚಾವ್ ಮಾಡಬೇಕಿತ್ತು. ಅದಕ್ಕಾಗಿ ಅಂದು ಬಿಜೆಪಿ ಮುಖಂಡರಿಬ್ಬರು ನನಗೆ 30 ಕೊಟಿ ರೂ. ಆಮಿಷ ಒಡ್ಡಿದ್ದರು ಎಂದು ಸುಳ್ಳು ಹೇಳಿಕೆ ನೀಡಿದ್ದಾಗಿ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಮ್ಯಾನೇಜರ್ ಸಾಗಿಸ್ತಿದ್ದ 2 ಕೋಟಿ ಹಣ ಯಾರದ್ದು?