Select Your Language

Notifications

webdunia
webdunia
webdunia
webdunia

ಅಯ್ಯಪ್ಪ ಸ್ವಾಮಿ ದೇಗುಲ ಮಹಿಳೆಯರಿಗೆ ಪ್ರವೇಶ: ಆಶಾದಾಯಕ ಬೆಳವಣಿಗೆ ಎಂದ ಖರ್ಗೆ

ಅಯ್ಯಪ್ಪ ಸ್ವಾಮಿ ದೇಗುಲ ಮಹಿಳೆಯರಿಗೆ ಪ್ರವೇಶ: ಆಶಾದಾಯಕ ಬೆಳವಣಿಗೆ ಎಂದ ಖರ್ಗೆ
ಕಲಬುರಗಿ , ಶನಿವಾರ, 29 ಸೆಪ್ಟಂಬರ್ 2018 (16:52 IST)
ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುಮಾರು ವರ್ಷಗಳ ಹೋರಾಟಕ್ಕೆ ಜಯ ಸಂದಿದೆ. ಸುಪ್ರೀಂ ಆದೇಶದಿಂದ ಮಹಿಳೆಯರಿಗೆ ಜಯ ಸಿಕ್ಕಂತಾಗಿದೆ.  ಅಸ್ಪೃಷ್ಯರಿಗೆ, ಸಾಮಾನ್ಯ ಜನರಿಗೆ, ಮಹಿಳೆಯರಿಗೆ ದೇವಾಲಯ ಎಂಟ್ರಿ ಕೊಡದಿರುವುದು ಸರಿಯಲ್ಲ. ದೇಶದಲ್ಲಿ ಸಮಾನತೆ ಕಾಪಾಡುವದು ಅಗತ್ಯವಿದೆ ಎಂದು ಹೇಳಿದರು.

ಸಮಾನತೆ ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬು ಬಾಕಿ ಪಾವತಿ ಮಾಡಿ ಎಂದ ಡಿಸಿ