Select Your Language

Notifications

webdunia
webdunia
webdunia
webdunia

ಕಾನ್ಸ್​ಟೆಬಲ್​​ ಮೇಲೆ ಹಲ್ಲೆ; ಉದ್ಯಮಿ ಬಂಧನ

ಕಾನ್ಸ್​ಟೆಬಲ್​​ ಮೇಲೆ ಹಲ್ಲೆ; ಉದ್ಯಮಿ ಬಂಧನ
ಮಂಡ್ಯ , ಶನಿವಾರ, 22 ಏಪ್ರಿಲ್ 2023 (16:00 IST)
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್. ಸಾಗರ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಉದ್ಯಮಿ ನಾಗರಾಜ ರೆಡ್ಡಿ ಪೊಲೀಸ್​ ಮೇಲೆ ಹಲ್ಲೆ ನಡೆಸಿದ್ದು, ಉದ್ಯಮಿ ನಾಗರಾಜ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಮೇಲೆ ಕಣ್ಣಿಟ್ಟಿದ್ದು, ತಪಾಸಣೆ ಮಾಡ್ತಿದ್ದಾರೆ. ಈ ವೇಳೆ ಉದ್ಯಮಿ ನಾಗರಾಜ ರೆಡ್ಡಿ ಕಾರನ್ನು ಪೊಲೀಸರು ತಡೆದು ತಪಾಸಣೆಗೆ ಒಳಪಡಿಸಿದಾಗ ನಾಗರಾಜ ರೆಡ್ಡಿ ಪೊಲೀಸ್​ ಕಾನ್ಸ್​ಟೆಬಲ್​ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ.. ಕರ್ತವ್ಯ ನಿರತ ಪೊಲೀಸ್ ಕಾನ್ಸ್​ಟೆಬಲ್ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನಾಗರಾಜ್​ ರೆಡ್ಡಿಯನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್​​ 504, 332, 353 ಕಾಯ್ದೆ ಅಡಿ ಆರೋಪಿಯನ್ನ ಬಂಧಿಸಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಖ್ಯಾತ ಮನೆಗಳ್ಳನ ಬಂಧನ