Select Your Language

Notifications

webdunia
webdunia
webdunia
webdunia

ಕೈ-ದಳ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಕ್ಯಾಂಪೇನ್

ಕೈ-ದಳ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಕ್ಯಾಂಪೇನ್
ರಾಮನಗರ , ಮಂಗಳವಾರ, 30 ಅಕ್ಟೋಬರ್ 2018 (18:24 IST)
ಉಪಚುನಾವಣೆ ಸಮರ ಕುತೂಹಲ ಮೂಡಿಸುತ್ತಿದೆ. ರಾಮನಗರದ ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರವನ್ನು  ಅನಿತಾಕುಮಾರಸ್ವಾಮಿ ನಡೆಸಿದರು.

ಕೈ-ದಳ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ರಾಮನಗರ ವ್ಯಾಪ್ತಿಯಲ್ಲಿ ಕ್ಯಾಂಪೇನ್ ನಡೆಸಿದರು. ಗಣಪತಿ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಶಾಸಕ ಗೋಪಾಲಯ್ಯ ಅವರು ಅನಿತಾಕುಮಾರಸ್ವಾಮಿ ಗೆ ಸಾಥ್ ನೀಡಿದರು.

 ರಾಮನಗರದಲ್ಲಿ ನನ್ನ ಪತಿ ಕುಮಾರಸ್ವಾಮಿಯವರಿಗೆ ಆರ್ಶೀವಾದ ಮಾಡಿದ್ದೀರಿ. ನನ್ನ ಮಾವ ದೇವೇಗೌಡರಿಗೂ ಆರ್ಶೀವಾದ ಮಾಡಿದ್ದೀರಿ. ಕುಮಾರಸ್ವಾಮಿಯವರು ಇಲ್ಲಿಂದಲೇ ಎರಡೂ ಬಾರಿ ಸಿಎಂ ಆಗಿದ್ದಾರೆ. ಈಗ ನಿಮ್ಮ ಆರ್ಶೀವಾದ ನನಗೂ ಬೇಕಿದೆ ಎಂದು ಮನವಿ ಮಾಡಿದರು.

ಈ ಬಾರಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ನನಗೆ ಆರ್ಶೀವಾದ ಮಾಡಿ ನಿಮ್ಮೆಲ್ಲರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು.

ರಾಮನಗರದ ಪ್ರತಿವಾರ್ಡ್ ಗೂ ಸಹ ಕುಡಿಯುವ ನೀರಿನ ವ್ಯವಸ್ಥೆ, ಯುಜಿಡಿ, ರಸ್ತೆ ವ್ಯವಸ್ಥೆ ಮಾಡಲಾಗುವುದು
ಅಧಿಕಾರವಿದೆ, ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ನಿಮ್ಮೆಲ್ಲರ ಕಷ್ಟ ದೂರವಾಗುತ್ತೆ ಎಂದು  ಪ್ರಚಾರದಲ್ಲಿ ಅನಿತಾಕುಮಾರಸ್ವಾಮಿ ಭರವಸೆ ನೀಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಗರಿಗೆ ಶೀಘ್ರ ತಟ್ಟಲಿರುವ ಆಟೋ ಪ್ರಯಾಣ ದರ ಬಿಸಿ