Select Your Language

Notifications

webdunia
webdunia
webdunia
webdunia

ಬಿಸಿಲೂರಿಗೆ ಅಂಬಿ ನಂಟು: ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಕಣ್ವರಲಾಲ್

ಬಿಸಿಲೂರಿಗೆ ಅಂಬಿ ನಂಟು: ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಕಣ್ವರಲಾಲ್
ರಾಯಚೂರು , ಭಾನುವಾರ, 25 ನವೆಂಬರ್ 2018 (18:20 IST)
ಕಲಿಯುಗದ ಕರ್ಣ ಅಂಬರೀಶ್ ಅವರು ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಿರುವುದು ಈಗ ನೆನಪು ಮಾತ್ರ.

ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೆ ಪತ್ನಿ ಸುಮಲತಾ ಜತೆ ಅಂಬಿ ಬಂದಿದ್ದರು. ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ದೇವದುರ್ಗ ಹೊರವಲಯದ ಸಿರವಾರ ಕ್ರಾಸ್​​ನಿಂದ ಸಮ್ಮೇಳನ ವೇದಿಕೆಯವರೆಗೂ ಬೈಕ್ ರ್ಯಾಲಿ ನಡೆಸಿ ಮೆರವಣಿಗೆಯನ್ನ ಅದ್ಧೂರಿಯಾಗಿ ನಡೆಸಿ ಸ್ವಾಗತ ಕೋರಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಬೆಳ್ಳಿಯ ಭಾವಚಿತ್ರ, ಬೆಳ್ಳಿ ಕಿರೀಟ ಹಾಗೂ ಬೆಳ್ಳಿ ಕತ್ತಿಯನ್ನ ನೀಡಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. 

ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅಂಬಿ, ನನಗೆ ಯೋಗ್ಯತೆ ಇದೆಯೋ ಇಲ್ಲವೋ ಆದ್ರೆ, ನನ್ನ ಮೇಲಿನ ಅಭಿಮಾನಕ್ಕೆ ಕನ್ನಡ ಜಾತ್ರೆಗೆ ಆಹ್ವಾನಿಸಿ ಇಷ್ಟು ಅದ್ಧೂರಿಯಾಗಿ ಸ್ವಾಗತ ಕೋರಿ ದೊಡ್ಡ ಸನ್ಮಾನ ಮಾಡಿರುವುದನ್ನ ಮರೆಯುವುದಿಲ್ಲ. ಅಲ್ಲದೇ ನನ್ನಿಂದ ಏನಾದರೂ ತಪ್ಪು ಆಗಿದ್ದರೆ ನನ್ನ ಕ್ಷಮಿಸುವಂತೆ ವೇದಿಕೆಯ ಮೇಲಿದ್ದ ಹಿರಿಯ ಸಾಹಿತಿಗಳಿಗೆ ಕೋರಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಅಗಲಿಕೆ: ಸಚಿವ ಪ್ರಿಯಾಂಕ ಸಂತಾಪ