Select Your Language

Notifications

webdunia
webdunia
webdunia
webdunia

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಹಗರಣ ಬಯಲಿಗೆ– ಬಿಎಸ್‌ವೈ

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಹಗರಣ ಬಯಲಿಗೆ– ಬಿಎಸ್‌ವೈ
ಕೋಲಾರ , ಶನಿವಾರ, 13 ಜನವರಿ 2018 (20:58 IST)
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ವಿರುದ್ಧದ ಹಗರಣಗಳನ್ನು ಬಯಲಿಗೆಳೆಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ಹಗರಣ ಬಯಲಿಗೆ ಎಳೆಯದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದಿದ್ದಾರೆ.
 
ಸಿದ್ದರಾಮಯ್ಯ ವಿರುದ್ಧದ ಚಾರ್ಜ್‌ಶೀಟ್‌ ತಯಾರಿಸಲಾಗುತ್ತಿದ್ದು, ಅಧಿಕಾರಕ್ಕೆ ಬಂದ ನಂತರ ಹಗರಣ ಬಯಲಿಗೆ ತರಲಾಗುವುದು. ದೇಶದಲ್ಲಿ ಅಚ್ಚೆದಿನ್ ಬಂದಿದ್ದು, ರಾಜ್ಯದಲ್ಲೂ ಅಚ್ಚೆದಿನ್‌ ಬರಲು ಸಿದ್ದರಾಮಯ್ಯನನ್ನು ಮನೆಗೆ ಕಳಿಸಬೇಕು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರ ಮನೆಗೆ ಪೇಜಾವರ ಶ್ರೀ ಭೇಟಿಯ ಕಾರಣ ತಿಳಿಸಿದ ಲಿಂಗಾಯತ ಸ್ವಾಮೀಜಿ