Select Your Language

Notifications

webdunia
webdunia
webdunia
webdunia

ನವರಸನಾಯಕ ಜಗ್ಗೇಶ್ ಗೂ ಸಿಕ್ಕಿತು ಟಿಕೆಟ್!

ನವರಸನಾಯಕ ಜಗ್ಗೇಶ್ ಗೂ ಸಿಕ್ಕಿತು ಟಿಕೆಟ್!
ಬೆಂಗಳೂರು , ಸೋಮವಾರ, 23 ಏಪ್ರಿಲ್ 2018 (20:39 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ನವರಸನಾಯಕ ಜಗ್ಗೇಶ್ ಗೆ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ.

ಮೂಲತಃ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವಾಗಿದ್ದ ಯಶವಂತಪುರದಲ್ಲಿ ಜಗ್ಗೇಶ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ‘ಬಯಸದೆ ಇದ್ದ ನನ್ನನ್ನು ಭಾಜಪ ಪಕ್ಷದ ಮುಖಂಡರು ಹರಸಿ ಯಶವಂತಪುರದ ಟಿಕೆಟ್ ಕೊಟ್ಟಿದ್ದಾರೆ. ನನ್ನ ಪ್ರೀತಿ ಪಾತ್ರರಾದ ಅಭಿಮಾನಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಮಾಹಿತಿ. ಹರಸಿ ಬಂದುಗಳೆ.. ರಾಯರು ಮೆಚ್ಚುವಂತೆ ಕಾರ್ಯ ಮಾಡುವೆ’ ಎಂದಿದ್ದಾರೆ.

ಈ ಮೊದಲು ಟ್ವೀಟ್ ಮಾಡಿದ್ದ ಜಗ್ಗೇಶ್ ಟಿಕೆಟ್ ನೀಡದೇ ಇದ್ದರೂ ಬೇಸರವಿಲ್ಲ. ನನ್ನ ಟಿವಿ, ಸಿನಿಮಾ ಕಾರ್ಯಕ್ರಮದಲ್ಲಿ 2019 ರವರೆಗೂ ಫುಲ್ ಬ್ಯುಸಿಯಾಗಿರುವೆ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಬಳ್ಳಾರಿ ಗಣಿ ದಣಿಗಳ ಸವಾಲು ನಿಜವಾಗುತ್ತಾ?