Select Your Language

Notifications

webdunia
webdunia
webdunia
webdunia

ಪುನೀತ್ ಭೇಟಿಯಿಂದ ತಿಪಟೂರಿನ ಈ ಅಂಗವಿಕಲ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಲಿದೆಯಾ...?

ಪುನೀತ್ ಭೇಟಿಯಿಂದ ತಿಪಟೂರಿನ ಈ ಅಂಗವಿಕಲ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಲಿದೆಯಾ...?
ಬೆಂಗಳೂರು , ಶನಿವಾರ, 17 ಮಾರ್ಚ್ 2018 (06:21 IST)
ತುಮಕೂರು : ತಮ್ಮ ನೆಚ್ಚಿನ ಸಿನಿಮಾ ನಟರನ್ನು ಭೇಟಿ ಮಾಡಬೇಕು  ಎಂಬ ಹಂಬಲ ಅಭಿಮಾನಿಗಳಲ್ಲಿ ಇರುತ್ತದೆ. ಅದೇರೀತಿ ತುಮಕೂರು ಜಿಲ್ಲೆಯ ತಿಪಟೂರಿನ  ಅಂಗವಿಕಲ ಮಕ್ಕಳಿಬ್ಬರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.


ತಿಪಟೂರಿನ ರಾಜಶೇಖರ್ ಹಾಗೂ ಜಯಮ್ಮ ದಂಪತಿಯ ಮಕ್ಕಳಾದ ಶೃತಿ ಹಾಗೂ ತೇಜಸ್ ಹುಟ್ಟಿದಾಗ ಅವರಿಗೆ ಯಾವುದೇ ಸಮಸ್ಯೆ ಇರಲ್ಲಿಲ್ಲ ಆದರೆ, ನಾಲ್ಕನೇ ತರಗತಿ ನಂತರ ಬೆಳೆಯುತ್ತಾ ಅಂಗವಿಕಲರಾಗಿದ್ದಾರೆ. ಇಬ್ಬರಿಗೂ ಮಾತು ನಿಂತಿದ್ದು, ಓಡಾಡಲೂ ಆಗದೇ ಹಾಸಿಗೆಯಲ್ಲೇ ಕಾಲಕಳೆಯುತ್ತಾರೆ. ಇವರಿಗೆ ಪುನೀತ್ ಎಂದರೆ ಪಂಚಪ್ರಾಣವಂತೆ. ಇವರಿಬ್ಬರು ಟಿವಿಯಲ್ಲಿ ಪುನೀತ್ ರಾಜಕುಮಾರ್ ಅವರ ಸಿನಿಮಾ ಬಂದರೆ ಕಣ್ಣು ಮಿಟುಕಾಯಿಸದೆ ನೋಡುತ್ತಾರೆ. ಪುನೀತ್ ಸಿನಿಮಾ ನೋಡಿ ಓಡಾಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಒಂದು ಬಾರಿ ಅವರು ಪುನೀತ್ ಅವರನ್ನು ಭೇಟಿ ಮಾಡಿದರೆ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಬಹುದು ಎಂದು ಮಕ್ಕಳ ಪೋಷಕರು ಬಯಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನ ಸಪ್ತಪದಿ ಯಾಕೆ ತುಳಿಯುತ್ತಾರೆ ಗೊತ್ತಾ...?