Select Your Language

Notifications

webdunia
webdunia
webdunia
webdunia

ನಿನ್ನೆಯೂ ಇಲ್ಲ, ಇಂದೂ ಇಲ್ಲ ಸಂಧಾನ ಸಭೆ: ಸುದೀಪ್-ಕುಮಾರ್ ವಿವಾದ ಸರಿ ಹೋಗೋದು ಯಾವಾಗ?

ನಿನ್ನೆಯೂ ಇಲ್ಲ, ಇಂದೂ ಇಲ್ಲ ಸಂಧಾನ ಸಭೆ: ಸುದೀಪ್-ಕುಮಾರ್ ವಿವಾದ ಸರಿ ಹೋಗೋದು ಯಾವಾಗ?
ಬೆಂಗಳೂರು , ಸೋಮವಾರ, 24 ಜುಲೈ 2023 (17:20 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವೆ ಎದ್ದಿರುವ ವಿವಾದವನ್ನು ಚಿತ್ರರಂಗದ ಹಿರಿಯರು ಮಾತುಕತೆ ಮೂಲಕ ಪರಿಹರಿಸಲು ಮುಂದಾಗಿದ್ದಾರೆ.

ಆದರೆ ನಿನ್ನೆ ರವಿಚಂದ್ರನ್ ನಿವಾಸದಲ್ಲಿ ನಡೆಯಬೇಕಿದ್ದ ಸಭೆ ನಡೆದಿರಲಿಲ್ಲ. ಇಂದೂ ಕೂಡಾ ಸುದೀಪ್ ಮತ್ತು ಕುಮಾರ್ ರನ್ನು ಕರೆಸಿ ಮಾತುಕತೆ ನಡೆಸುವ ಸಾಧ್ಯತೆಯಿಲ್ಲ. ಹಾಗಿದ್ದರೆ ಇಬ್ಬರ ನಡುವೆ ಸಂಧಾನ ಹೇಗೆ?

ಮೂಲಗಳ ಪ್ರಕಾರ ಸಂಧಾನ ನಡೆಸಲು ಮುಂದಾಗಿರುವ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ತಮ್ಮದೇ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ನಿನ್ನೆ ಇಂದು ಮಾತುಕತೆ ಸಾಧ್ಯವಾಗಿಲ್ಲ. ಹೀಗಾಗಿ ಈ ವಾರಂತ್ಯಕ್ಕೆ ಸುದೀಪ್ ಮತ್ತು ಕುಮಾರ್ ರನ್ನು ಕರೆಸಿ ಸಂಧಾನ ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರವಿಚಂದ್ರನ್, ಶಿವಣ್ಣ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ವಿವಾದ: ಸೂರಪ್ಪ ಬಾಬು ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಏಕವಚನದಲ್ಲಿ ವಾಗ್ದಾಳಿ