Select Your Language

Notifications

webdunia
webdunia
webdunia
webdunia

ಮೋದಿಯನ್ನು ಬೈಯುವ ಪ್ರಕಾಶ್ ರಾಜ್‌ ಸಮಾಜಕ್ಕಾಗಿ ಏನು ಮಾಡಿದ್ದಾರೆ - ಹುಚ್ಚ ವೆಂಕಟ್

ಮೋದಿಯನ್ನು ಬೈಯುವ ಪ್ರಕಾಶ್ ರಾಜ್‌ ಸಮಾಜಕ್ಕಾಗಿ ಏನು ಮಾಡಿದ್ದಾರೆ - ಹುಚ್ಚ ವೆಂಕಟ್
ಮಡಿಕೇರಿ , ಶನಿವಾರ, 5 ಮೇ 2018 (07:12 IST)
ಮಡಿಕೇರಿ : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ ಹುಚ್ಚ ವೆಂಕಟ್ ಅವರು ಇದೀಗ ಪ್ರಧಾನಿ ಮೋದಿ  ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ನಟ ಪ್ರಕಾಶ್ ರೈ ವಿರುದ್ಧ ಸಿಡಿದೆದ್ದಿದ್ದಾರೆ.


ಈ ಬಗ್ಗೆ ಮಾತನಾಡಿದ  ಅವರು,’ ಮೋದಿ ನನ್ನ ಅಚ್ಚುಮೆಚ್ಚಿನ ನಾಯಕ. ಚಿತ್ರನಟ ಪ್ರಕಾಶ್ ರಾಜ್‌ಗೆ ಮಾಡಲು ಯಾವುದೇ ಕೆಲಸಗಳಿಲ್ಲ. ಆದ್ದರಿಂದ ಹೋದಲ್ಲೆಲ್ಲ ಸಿನಿಮಾ  ಡೈಲಾಗ್ ಹೊಡೆಯುತ್ತಿದ್ದಾರೆ. ಇದನ್ನು ಸಿನಿಮಾದಲ್ಲಿ ಮಾತ್ರ ಜನರು ಇಷ್ಟಪಡುತ್ತಾರೆಯೇ ಹೊರತು, ರಿಯಲ್ ಲೈಫ್‌ನಲ್ಲಿ ಈ ಡೈಲಾಗ್ ವರ್ಕೌಟ್ ಆಗಲ್ಲ. ಉತ್ತಮ ವಿಚಾರಗಳನ್ನು ಎಲ್ಲರೂ ಇಷ್ಟಪಡಬೇಕೆಂದೇನೂ ಇಲ್ಲ. ಹಾಗೆಯೇ ಪ್ರಧಾನಿ ಮೋದಿ ಎಲ್ಲರಿಗೂ ಇಷ್ಟವಾಗಬೇಕೆಂದೂ ಇಲ್ಲ. ಮೋದಿ ಬಗ್ಗೆ ಮಾತನಾಡಬೇಕಾದ್ರೆ ಯೋಗ ಮತ್ತು ಯೋಗ್ಯತೆ ಎರಡೂ ಇರಬೇಕು’ ಎಂದು ಹೇಳಿದ್ದಾರೆ.


ಹಾಗೇ ‘ಪ್ರಕಾಶ್ ರಾಜ್‌ ಯಾವತ್ತೂ ದೇಶವನ್ನು ಪ್ರೀತಿಸಲ್ಲ. ಯೋಗ್ಯರ ಬಗ್ಗೆ ಅಸೂಯೆ ಪಡುತ್ತಿದ್ದಾರೆ. ಪ್ರಚಾರಕ್ಕಾಗಿ  ಮೋದಿ ವಿರುದ್ಧ ಭಾಷಣ ಮಾಡುತ್ತಿದ್ದಾರೆ. ಮೋದಿಯನ್ನು ಬೈಯುವ ಪ್ರಕಾಶ್ ರಾಜ್‌ ಸಮಾಜಕ್ಕಾಗಿ ಏನು ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್ ಎಂದು ಹೆಸರು ಪಡೆದ ನೀನು, ಜೀವನದಲ್ಲಿ ವಿಲನ್ ಆಗಬೇಡ. ಮೊದಲು ದೇಶದ ಪ್ರಧಾನಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ’ ಎಂದು ಅವರು  ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಚ್ಚ ವೆಂಕಟ್ ಮದುವೆಯಾಗುತ್ತಿದ್ದಾರಂತೆ, ಯಾವಾಗ ಗೊತ್ತಾ?