Select Your Language

Notifications

webdunia
webdunia
webdunia
webdunia

ಕೇರಳಕ್ಕೆ ಶೂಟಿಂಗ್ ಗೆ ಬಂದ ದಳಪತಿ ವಿಜಯ್ ಕಾರು ಜಖಂ

Thalapathy Vijay

Krishnaveni K

ತಿರುವನಂತಪುರಂ , ಮಂಗಳವಾರ, 19 ಮಾರ್ಚ್ 2024 (12:38 IST)
ತಿರುವನಂತಪುರಂ: 14 ವರ್ಷಗಳ ಬಳಿಕ ದಳಪತಿ ವಿಜಯ್ ಸಿನಿಮಾ ಶೂಟಿಂಗ್ ಗಾಗಿ ದೇವರ ನಾಡು ಕೇರಳಕ್ಕೆ ಬಂದಿದ್ದಾರೆ. ಆಧರೆ ಬಂದ ದಿನವೇ ಅವರಿಗೆ ಶಾಕ್ ಆಗಿದೆ.

ದಳಪತಿ ವಿಜಯ್ ಕಾರನ್ನು ಅಭಿಮಾನಿಗಳು ಜಖಂಗೊಳಿಸಿದ್ದಾರೆ. ವಿಜಯ್ ಉಳಿದುಕೊಂಡಿದ್ದ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದ್ದಲ್ಲದೆ, ಕಾರಿಗೂ ಹಾನಿ ಮಾಡಲಾಗಿದೆ. ಬಹಳ ಸಮಯದ ನಂತರ ವಿಜಯ್ ನನ್ನು ಕೇರಳದಲ್ಲಿ ನೋಡಿದ ಅಭಿಮಾನಿಗಳು ಈ ರೀತಿ ಅತಿರೇಕದ ವರ್ತನೆ ತೋರಿದ್ದಾರೆ.

ದಳಪತಿ ವಿಜಯ್ ಇದೀಗ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಸಿನಿಮಾದ ಚಿತ್ರೀಕರಣಕ್ಕಾಗಿ ವಿಜಯ್ ತಿರುವನಂತಪುರಂಗೆ ಬಂದಿದ್ದಾರೆ. ಅವರನ್ನು ಏರ್ ಪೋರ್ಟ್ ನಲ್ಲಿಯೇ ಜನ ಅದ್ಧೂರಿಯಾಗಿ ಸ್ವಾಗತಿಸಿದ್ದರು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅವರು ಉಳಿದುಕೊಂಡಿದ್ದ ಹೋಟೆಲ್ ಬಳಿಯೂ ಜನ ಜಮಾಯಿಸಿದ್ದರು. ವಿಶೇಷವೆಂದರೆ ವಿಜಯ್ 14 ವರ್ಷಗಳ ಬಳಿಕ ಕೇರಳಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಅವರಿಗೆ ಅನೇಕ ಅಭಿಮಾನಿ ಬಳಗವಿದೆ. ಅವರಿಂದ ತಮ್ಮ ಮೆಚ್ಚಿನ ನಟನನ್ನು ಕಂಡ ಖುಷಿಯಲ್ಲಿ ಇಂತಹ ಮಿತಿ ಮೀರಿದ ವರ್ತನೆ ಕಂಡುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಾಜಿಗೆ ರಾಜಕೀಯ ಆಗ್ತಿರಲಿಲ್ಲ ಎನ್ನುವುದು ಸುಳ್ಳು ಎಂದ ಶಿವರಾಜ್ ಕುಮಾರ್